೩ಕೋಟಿ ವೆಚ್ಚದ ವಸತಿ ನಿಲಯದ ಭೂಮಿಪೂಜೆ ::ಜಿಲ್ಲಾಸ್ಪತ್ರೆ ದೊರೆಯುವವರೆಗೂ ಹೋರಾಟ ಮಾಡಲಾಗುವುದು-ವಜ್ಜಲ್

Laxman Bariker
೩ಕೋಟಿ ವೆಚ್ಚದ ವಸತಿ ನಿಲಯದ ಭೂಮಿಪೂಜೆ ::ಜಿಲ್ಲಾಸ್ಪತ್ರೆ ದೊರೆಯುವವರೆಗೂ ಹೋರಾಟ ಮಾಡಲಾಗುವುದು-ವಜ್ಜಲ್
WhatsApp Group Join Now
Telegram Group Join Now

೩ಕೋಟಿ ವೆಚ್ಚದ ವಸತಿ ನಿಲಯದ ಭೂಮಿಪೂಜೆ
ಜಿಲ್ಲಾಸ್ಪತ್ರೆ ದೊರೆಯುವವರೆಗೂ ಹೋರಾಟ ಮಾಡಲಾಗುವುದು-ವಜ್ಜಲ್

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ಪಟ್ಟಣಕ್ಕೆ ಮಂಜೂರಿಯಾಗಿರುವ ೨೦೦ಹಾಸಿಗೆಯ ಜಿಲ್ಲಾಸ್ಪತ್ರೆ ಎತ್ತಂಗಡಿಯಾಗಿದ್ದು ಪುನಃ ಲಿಂಗಸಗೂರಿಗೆ ಜಿಲ್ಲಾಸ್ಪತ್ರೆ ದೊರೆಯುವವರೆಗೂ ಹೋರಾಟ ಮಾಡಲಾಗುವುದು ಎಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದರು

oplus_0

ಅವರು ಪಟ್ಟಣದ ಜಿಟಿಟಿಸಿ ಕಾಲೇಜಿನಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಯಿAದ ಮಂಜೂರಿಯಾಗ ೩ಕೋಟಿ ವೆಚ್ಚದ ಬಾಲಕರ ವಸತಿ ನಿಲಯದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡುತ್ತಾ ಈ ಕ್ಷೇತ್ರವು ಮೀಸಲು ಕ್ಷೇತ್ರವಾಗಿರುವುದರಿಂದ ಹೆಚ್ಚಿನ ಅಭಿವೃದ್ದಿ ಕೆಲಸಗಳು ಆಗಬೇಕು ಆದರೆ ಮಿಸಲು ಕ್ಷೇತ್ರಕ್ಕೆ ಬಂದಿರುವ ೨೦೦ಹಾಸಿಗೆಯ ಜಿಲ್ಲಾಸ್ಪತ್ರೆ ಬೇರೆ ತಾಲೂಕಿಗೆ ಮಂಜೂರಿಯಾಗುತ್ತದೆ ಎಂದರೆ ಸರಕಾರ ಇದರಲ್ಲಿ ರಾಜಕೀಯ ಮಾಡುತ್ತಿದೆ ನಾನು ಬಿಜೆಪಿ ಶಾಸಕನಾಗಿರುವುದರಿಂದ ಕಾಂಗ್ರೆಸ್ ಶಾಸಕರಿರುವ ಸಿಂಧನೂರು ಕ್ಷೇತ್ರಕ್ಕೆ ಎತ್ತಂಗಡಿ ಮಾಡಲಗಿದೆ ಪುನಃ ಲಿಂಗಸಗೂರಿಗೆ ೨೦೦ ಹಾಸಿಗೆ ಆಸ್ಪತ್ರೆ ದೊರೆಯುವವರೆಗೂ ಎಲ್ಲಾ ಸಂಘಟನೆಗಳು ಜನಪ್ರತಿನಿಧಿಗಳು ಸೇರಿದಂತೆ ಪಕ್ಷಾತೀತವಾಗಿ ಹೋರಾಟ ಮಾಡಲಾಗುವುದು ಎಂದರು
ಕಾAಗ್ರೆಸ್ ಸರಕಾರದಲ್ಲಿ ಹೆಚ್ಚು ಗ್ಯಾರಂಟಿ ಯೋಜನೆಗೆ ಒತ್ತು ನೀಡುತ್ತಿರುವುದರಿಂದ ಅಭಿವೃದ್ದಿ ಕೆಲಸಗಳು ಕುಂಠಿತವಾಗುತ್ತಿವೆ ಮೀಸಲು ಕ್ಷೇತ್ರವಾಗಿರುವುದರಿಂದ ಹೆಚ್ಚಿನ ಅನುದಾನ ನಿಡಬೇಕು ಆದರೆ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಜಿಲ್ಲಾಧಿಕಾರಿಗಳಿಗೆ ಒಂದುಕೋಟಿ ಹಣ ನೀಡಬೇಕು ಎಂದರೆ ಹಣ ನೀಡಲಿಲ್ಲ ತಾರತಮ್ಯ ಮಾಡಲಾಗುತ್ತಿದೆ ಕುಡಿಯುವ ನೀರಿನ ಯೋಜನೆಗಳ ಕೆಲಸ ನಡೆಯುತ್ತಿದೆ,ಅಮೃತಯೋಜನೆಯ ಕಾಮಗಾರಿ ನಡೆಯುತ್ತಿದೆ,ರಸ್ತೆಗಳು ಕೆಲಸ ಹೀಗೆ ಹಲವಾರು ಕಾಮಗಾರಿಗಳು ನಡೆಯುತ್ತಿವೆ ಆದರೆ ಕೆಲವೊಬ್ಬರು ಯಾವುದೆ ಕೆಲಸಗಳು ನಡೆಯುತ್ತಿಲ್ಲವೆಂದು ಆಪಾದನೆ ಮಾಡುತ್ತಿದ್ದಾರೆ ನಮ್ಮ ಕೆಲಸಗಳನ್ನು ಗುರುತಿಸಿ ಮಾತನಾಡುವುದು ಸೂಕ್ತವೆಂದರು
ಕ್ಷೇತ್ರದಲ್ಲಿ ನಂದವಾಡಗಿ ಏತನೀರಾವರಿ ಕಾಮಗಾರಿ ವಿಳಂಭವಾಗಿದೆ,ಮುದಗಲ್ಕೋಟೆ ದುರಸ್ಥಿ,ಜಲದುರ್ಗಕೋಟೆ ದುರಸ್ಥಿ ಕಾಮಗಾರಿ ನಡೆಯುತ್ತಿಲ್ಲ ಹಲವಾರು ಆರ್ ಓ ಪ್ಲಾಂಟಗಳು ಬಂದ್ ಆಗಿವೆ ಅವುಗಳನ್ನು ಅಭಿವೃದ್ದಿ ಪಡಿಸುವ ಕೆಲಸ ಮಾಡಲಾಗುತ್ತಿದೆ ಜಿಟಿಟಿಸಿ ಕಾಲೇಜಿಗೆ ದೊರಕಿರುವ ೩ಕೋಟಿ ಅನುದಾನದ ಮಂಜೂರಿಯಾಗಿದ್ದು ಗುತ್ತಿಗೆದಾರರು ಗುಣಮಟ್ಟದ ಕೆಲಸ ನಿರ್ವಹಿಸಬೇಕು ವಿದ್ಯಾರ್ಥೀಗಳು ಅದರ ಸದುಪಯೋಗ ಪಡೆಯಬೇಕು ಎಂದರು
ರಾಯಚೂರು ಕೊಪ್ಪಳ ಕ್ಷೇತ್ರದ ವಿಧಾನಪರಿಷತ್ ಸದಸ್ಯರಾದ ಶರಣಗೌಡ ಪಾಟೀಲ್ ಬಯ್ಯಾಪುರ ಮಾತನಾಡುತ್ತಾ ನಮ್ಮ ಸರಕಾರಿ ಕೆಕೆಆರಡಿಬಿಗೆ ೫ಸಾವಿರಕೋಟಿ ಅನುದಾನವನ್ನು ನೀಡಿದ್ದು ಅದರಲ್ಲಿ ತಾಲೂಕಿಗೆ ಹೆಚ್ಚಿನ ಅಣುದಾನ ಬಂದಿದೆ ಅದರಲ್ಲಿ ಕ್ಷೇತ್ರದ ಅಭಿವೃದ್ದಿಗೆ ಹೆಚ್ಚು ಒತ್ತು ನೀಡಬೇಕಾಗಿದೆ ಅಲ್ಲದೆ ೩ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ವಸತಿ ನಿಲಯದ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಂಡು ತಮ್ಮ ಉತ್ತಮ ಭವಿಷ್ಯರೂಪಿಸಿಕೊಳ್ಳಲಿ ಎಂದರು
ಪ್ರಾಸ್ತಾವಿಕವಾಗಿ ಜಿಟಿಟಿಸಿ ಕಾಲೇಜಿನ ಪ್ರಾಚಾರ್ಯರಾದ ಪ್ರತಿಭಾ ಪಾಟೀಲ್ ಮಾತನಾಡಿ ಜಿಟಿಟಿಸಿ ಕಾಲೇಜಿನಲ್ಲಿ ಪ್ರವೇಶಪಡೆದರೆ ನೌಕರಿ ಗ್ಯಾರಂಟಿ ಆಸಕ್ತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು
ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭೂಪನಗೌಡ ಕರಡಕಲ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಪಾಮಯ್ಯ ಮುರಾರಿ, ಬಿಜೆಪಿಯ ಹಿರಿಯ ಮುಖಂಡ ಗಿರಿಮಲ್ಲನಗೌಡ ಪಾಟೀಲ್, ವೀರನಗೌಡ ಲೆಕ್ಕಿಹಾಳ, ಅಯ್ಯಪ್ಪ ಮಾಳೂರು ವಕೀಲ ಸೇರಿದಂತೆ ಇದ್ದರು

WhatsApp Group Join Now
Telegram Group Join Now
Share This Article