ಲಿಂಗಸಗೂರಿಗೆ ಜಿಲ್ಲಾಸ್ಪತ್ರೆ ತರುವ ತನಕ ಹೋರಾಟ ನಿಲ್ಲದು-ವಜ್ಜಲ್
ಬಿಜೆಪಿ ಶಾಸಕ ಎನ್ನುವುದರಿಂದ ಜಿಲ್ಲಾಸ್ಪತ್ರೆ ಸ್ಥಳಾಂತರಕ್ಕೆ ಪ್ರಮುಖಕಾರಣ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಕ್ಷೇತ್ರವು ಬಿಜೆಪಿ ಶಾಸಕರನ್ನು ಹೊಂದಿದೆ ಎಂಬ ಭಾವನೆಯಿಂದ ೨೦೦ ಹಾಸಿಗೆಯ ಜಿಲ್ಲಾಸ್ಪತ್ರೆ ಸ್ಥಳಾಂತರವಾಗಿರುವುದಕ್ಕೆ ಪ್ರಮುಖ ಕಾರಣವಾಗಿದ್ದು ಪುನಃ ಲಿಂಗಸಗೂರಿಗೆ ಜಿಲ್ಲಾಸ್ಪತ್ರೆ ತರುವ ತನಕ ನಮ್ಮ ಹೋರಾಟ ನಿಲ್ಲುವುದಿಲ್ಲವೆಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದರು

ಪಟ್ಟಣದ ಈಶ್ವರ ದೇವಸ್ಥಾನದಲ್ಲಿ ವಿವಿಧ ಸಂಘಟಣೆಗಳ ಒಕ್ಕೂಟದ ಸಭೆಯಲ್ಲಿ ಲಿಂಗಸುಗೂರ ಸರಕಾರಿ ಆಸ್ಪತ್ರೆ ಜಿಲ್ಲಾ ಮಟ್ಟದ ಆಸ್ಪತ್ರೆಯಾಗಿ ಮೇಲ್ದರ್ಜೆಗೆರಿಸಲು ದಿನಾಂಕ ೦೩-೦೫-೨೦೨೫ರಂದು ಪಟ್ಟಣ ಸಂಪೂರ್ಣ ಬಂದ ಆಚರಿಸಲು ಹಾಗೂ ಹೋರಾಟಕ್ಕೆ ಶಾಸಕ ಮಾನಪ್ಪ ಡಿ ವಜ್ಜಲ ಬೆಂಬಲ ವ್ಯಕ್ತಪಡಿಸಿದರು.
ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡುತ್ತ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಮಸ್ಯೆಗಳ ಪರಿಹಾರ ಅಭಿವೃದ್ಧಿಗೆ ಹೋರಾಟ ಮಾಡುವುದು ಅನಿವಾರ್ಯ ಲಿಂಗಸುಗೂರ ಸರಕಾರಿ ಆಸ್ಪತ್ರೆ ೨೦೦ ಹಾಸಿಗೆಯ ಜಿಲ್ಲಾ ಮಟ್ಟದ ಆಸ್ಪತ್ರೆನ್ನಾಗಿ ಮಾಡಲು ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವಧಿಯಲ್ಲಿ ಜಿಲ್ಲಾಸ್ಪತ್ರೆಗೆ ಪ್ರಸ್ತಾವನೆ ಸಲ್ಲಿಸಿ ಸತತ ಪ್ರಯತ್ನದಿಂದ ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟದಲ್ಲಿ ಅನುಮೂದನೆ ಪಡೆಯಲಾಗಿತ್ತು ಜಿಲ್ಲಾ ಅಸ್ಪತ್ರೆಗೆ ಕಟ್ಟಡ ನಿರ್ಮಾಣ ಮಾಡಲು ಜಮೀನು ಎಲ್ಲಾ ಸೌಲಭ್ಯಗಳನ್ನು ಹೊಂದಲಾಗಿತ್ತು ಆದರೆ ರಾಜಕೀಯ ಕಾರಣಕ್ಕೆ ಆಸ್ಪತ್ರೆಯನ್ನು ಸಿಂಧನೂರಿಗೆ ಸ್ಥಳಾಂತಿರಿಸಲಾಗಿದೆ ಲಿಂಗಸುಗೂರಿಗೆ ಪುನ ಜಿಲ್ಲಾಸ್ಪತ್ರೆ ಪಡೆಯಲು ಎಲ್ಲಾ ಸಂಘಟಣೆಯವರು ಜಾತ್ಯಾತೀತವಾಗಿ ಪಕ್ಷಾತೀತವಾಗಿ ಬಂದನಲ್ಲಿ ಭಾಗವಹಿಸಲು ಕರೆ ನೀಡಿದರು.
ಪೂರ್ವಭಾವಿ ಸಭೆಯಲ್ಲಿ ನ್ಯಾಯಾವಾದಿಗಳ ಸಂಘದ ಅಧ್ಯಕ್ಷ ಭೂಪನಗೌಡ ಪಾಟೀಲ, ಶಿಕ್ಷಣ ಸಂಸ್ಥೆಯ ಮಾಹಾಂತೇಶ ಗೌಡೂರು, ಸರಕಾರಿ ನಿವೃತ್ತ ನೌಕರರ ಸಂಘದ ತಾಲೂಕು ಅಧ್ಯಕ್ಷ ಅಮರೇಶಪ್ಪ ಹೂನೂರ, ಸಿಸಿ ಕರಡಕಲ್ ವಕೀಲ, ದುರ್ಗಪ್ಪ ಸೋಮನಮರಡಿ, ಮಹಿಳಾ ಸಂಘಟಣೆ ಅಧ್ಯಕ್ಷೆ ಜೋತಿ ಸುಂಕದ, ಹಾಲುಮತದ ಸಮಾಜದ ಕುಪ್ಪಣ್ಣ ಕೂಡ್ಲಿ, ದಲಿತ ಸಂಘಟನೆರಮೇಶ ಗೋಸ್ಲೆ,,ಎನ್ ಸ್ವಾಮಿ ರೈತ ಸಂಘಟಣೆ ಅಧ್ಯಕ್ಷ ಸಂಗನಗೌಡ, ಜಿವಿ ಕೆಂಚನಗುಡ್ಡ ಮಂಜುನಾಥ ಕಾಮಿನ್ ಕುಪ್ಪಣ್ಣ ಮಾಣಿಕ್ ವಕೀಲ ಸೇರಿದಂತೆಮಾತನಾಡಿ ಬಂದಗೆ ಬೆಂಬಲಿಸಲು ಮನವಿ ಮಾಡಿದರು.
ಸಂದರ್ಭದಲ್ಲಿ ದ್ಯಾಮಣ್ಣ ಪೂಲಭಾವಿ, ವೀರನಗೌಡ ಲೆಕ್ಕಿಹಾಳ, ಗಿರಿಮಲ್ಲಣಗೌಡ, ಆಯಪ್ಪ ಮಾಳೂರು, ಗುರುರಾಜ ಗೌಡೂರ, ಶರಣಮ್ಮ ಹೂನ್ನೂರ, ನಾರಾಯಣಪ್ಪ ನಾಯ್ಕ, ಜೇವಲೆಪ್ಪ ನಾಯ್ಕ, ಹನುಮಂತ ಬಡಿಗೇರ, ಮಂಜುನಾಥ ಕಾಮಿನಿ, ಮಲ್ಲಿಕಾರ್ಜುನ, ಎನ ಎಸ ಸ್ವಾಮಿ ಹಾಗೂ ಇತರರು ಭಾಗವಹಿಸಿದರು