ಲಿಂಗಸಗೂರು::ಸ್ವಂತ ಸ್ನೇಹಿತನನ್ನೇ ಕೊಂದ ಪ್ರಕರಣ:ಆರೋಪಿ ಪತ್ತೆ

Laxman Bariker
ಲಿಂಗಸಗೂರು::ಸ್ವಂತ ಸ್ನೇಹಿತನನ್ನೇ ಕೊಂದ ಪ್ರಕರಣ:ಆರೋಪಿ ಪತ್ತೆ
WhatsApp Group Join Now
Telegram Group Join Now

ಲಿಂಗಸಗೂರು::ಸ್ವಂತ ಸ್ನೇಹಿತನನ್ನೇ ಕೊಂದ ಪ್ರಕರಣ:ಆರೋಪಿ ಪತ್ತೆ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸುಗೂರು ಜೂ 08 : – ಸಂಚು ಮಾಡಿ ಪ್ರಾಣ ಸ್ನೇಹಿತನನ್ನು ನಿರ್ಜನ ಪ್ರದೇಶಕ್ಕೆ ಕರೆದು ಇದು ಜೀವ ತೆಗೆದ ಘಟನೆ ತಾಲೂಕಿನ ಯರಗುಂಟಿ ಗ್ರಾಮದಲ್ಲಿ ನಡೆದಿದೆ.
ಬಸನಗೌಡ ಎಂಬ ಯರಗುಂಟಿ ಗ್ರಾಮದ ಜಮೀನಿನಲ್ಲಿ ರಕ್ತದ‌ ಮಡುವಿನಲ್ಲಿ ಹೆಣವಾಗಿ ಬಿದ್ದಿದ್ದ. ಯರದ್ದೋ ಕರೆ ಬಂತು ಅಂತ ಎದ್ದು ಹೋಗಿದ್ದ ಬಸನಗೌಡ ಒಂದು ರಾತ್ರಿ ಕಳೆದರೂ ಮನೆಗೆ ಬಂದಿರಲಿಲ್ಲ.ಫೋನ್ ಸ್ವಚ್ ಆಫ್ ಆಗಿತ್ತು.


ಹುಡುಕುತ್ತಾ ಜಮೀನಿನ ಕಡೆಗೆ ಹೋದಾಗ ಬಸನಗೌಡ ಸತ್ತು ಬಿದ್ದಿದ್ದ. ಬಸನಗೌಡನ ಶವ ನೋಡುತ್ತಲೇ ಗಾಭರಿಯಾಗಿ ಓಡಿ ಹೋಗಿ ಮನೆಯವರಿ ಹಾಗೂ ಊರಿನವರಿಗೆ ಸುದ್ದಿ ಮುಟ್ಟಿಸಿದ್ದಾರೆ. ಕೂಡಲೇ ಗ್ರಾಮಸ್ಥರು ಸ್ಥಳಕ್ಕೆ ಬಂದು ಶವ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ‌. ಯಾವಾಗ ಇಲ್ಲೊಂದು‌ ಕೊಲೆ ನಡೆದಿದೆ ಅನ್ನೋ‌ ಮಾಹಿತಿ ಲಿಂಗಸುಗೂರು ಪೊಲೀಸರಿಗೆ ಹೋಯ್ತೋ, ಕೂಡಲೇ ಯರಗುಂಟಿ ಗ್ರಾಮದ ಈ ಘಟನಾ ಸ್ಥಳಕ್ಕೆ ಪೋಲಿಸರು ಭೇಟಿ ಕೊಟ್ಟಿದಾರೆ.
ಸ್ಥಳ ಪರಿಶೀಲನೆ‌ ಮಾಡಿದಾಗ ಪೋಲೀಸರಿಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಸನಗೌಡನ ದೇಹದ ಹೊರತು ಬೇರೆ ಏನೂ ಕಾಣಿಸಲಿಲ್ಲ. ಆದ್ರೆ ಒಂದು ಕಿ. ಮೀ ದೂರದಲ್ಲಿ ರಕ್ತ ಮೆತ್ತಿದ ಕೊಡಲಿಯೊಂದು ಪತ್ತೆಯಾಗಿತ್ತು. ಕೂಡಲೇ ಸ್ಥಳಕ್ಕೆ ಶ್ವಾನದಳವನ್ನ ಹಾಗೂ ಬೆರಳಚ್ಚು ತಜ್ಞರನ್ನು ಕರೆಸಿದ ಪೊಲೀಸರು ತನಿಖೆಯನ್ನ ಚುರುಕುಗೊಳಿಸ್ತಾರೆ. ಯಾವಾಗ ಬಸನಗೌಡನ ಶವ ಇದ್ದ ಜಾಗಕ್ಕೆ ಬಂದ ಡಾಗ್ ಸ್ಕ್ವಾಡ್ ಟಿಂನ ಶ್ವಾನ ಶವ ಮೂಸಿ‌ ನೋಡಿ, ನೇರವಾಗಿ ಕೊಡಲಿ ಬಿದ್ದ ಜಾಗಕ್ಕೆ ತೆರಳಿದೆ. ಕೊಡಲಿಯನ್ನು ಮೂಸಿ ನೋಡಿದ್ದೇ ತಡ ನೇರವಾಗಿ ಪೊಲೀಸ್ ನಾಯಿ ಕೊಲೆ ನಡೆದ ಸ್ಥಳದಿಂದ ಮೂರುವರೆ ಕಿಲೋ‌ಮೀಟರ್ ದೂರದಲ್ಲಿದ್ದ ಹಂತಕನ ಮನೆಗೆ ತೆರಳಿ ಬೊಗಳುತ್ತ ನಿಂತಿದೆ. ಅಷ್ಟರಲ್ಲಿ ಪೊಲೀಸರಿಗೆ ಹಂತಕ ಯಾರು ಅನ್ನೋ ಸ್ಪಷ್ಟ ಮಾಹಿತಿ ಸಿಕ್ಕಿದೆ.

ಕಾರ್ಯಪ್ರವೃತ್ತರಾದ ಪೊಲೀಸ್ ತನಿಖೆ ನಡೆಸಿ  ಆರೋಪಿ ಶರಣಪ್ಪ ತಂ ಶರಣಪ್ಪ ಬಂಗಿ ಎನ್ನುವವನನ್ನು ಪತ್ತೆಹಚ್ಚಿ ನ್ಯಾಯಾಂಗಧನಕ್ಕೆ ಒಪ್ಪಿಸಿದ್ದಾರೆ

WhatsApp Group Join Now
Telegram Group Join Now
Share This Article