ಜಿಲ್ಲಾಸ್ಪತ್ರೆ ಸ್ಥಳಾಂತರ ವಿರೋಧಿಸಿ, ಲಿಂಗಸುಗೂರ ಸಂಪೂರ್ಣ ಬಂದ್ ಯಶಸ್ವಿ

Laxman Bariker
ಜಿಲ್ಲಾಸ್ಪತ್ರೆ ಸ್ಥಳಾಂತರ ವಿರೋಧಿಸಿ, ಲಿಂಗಸುಗೂರ ಸಂಪೂರ್ಣ ಬಂದ್ ಯಶಸ್ವಿ
WhatsApp Group Join Now
Telegram Group Join Now

*ಜಿಲ್ಲಾಸ್ಪತ್ರೆ ಸ್ಥಳಾಂತರ ವಿರೋಧಿಸಿ, ಲಿಂಗಸುಗೂರ ಸಂಪೂರ್ಣ ಬಂದ್ ಯಶಸ್ವಿ

ಕಲ್ಯಾಣ ಕರ್ನಾಟಕ ವಾರ್ತೆ*

ಲಿಂಗಸುಗೂರ
ಪಟ್ಟಣದ ಸರಕಾರಿ ಆಸ್ಪತ್ರೆ ೧೦೦ ಹಾಸಿಗೆಯಿಂದ ೨೦೦ ಹಾಸಿಗೆ ಜಿಲ್ಲಾಸ್ಪತ್ರೆ ಮಂಜೂರಿಯಾಗಿದ್ದು ಸ್ಥಳಾಂತರವಾಗಿದ್ದು ಪುನಃ ಪಟ್ಟಣದಲಿ ಸ್ಥಾಪಿಸುವಂತೆ  ಒತ್ತಾಯಿಸಿ ಲಿಂಗಸುಗೂರ ಅಭಿವೃದ್ಧಿ ಹೋರಾಟ ಸಮಿತಿ ಬಂದಗೆ ಕರೆ ನೀಡಿದು ಲಿಂಗಸುಗೂರು ಬಂದ ಸಂಪೂರ್ಣ ಯಶಸ್ವಿಯಾಗಿದೆ.


ಹೋರಾಟವು ಪಕ್ಷಾತೀತವಾಗಿ ಹಾಗೂ ಕನ್ನಡಪರ ಸಂಘಟಣೆಗಳವರು, ದಲಿತ ಸಂಘಟಣೆ, ರೈತ ಸಂಘ, ವರ್ತಕರ ಸಂಘ, ನ್ಯಾಯಾವಾದಿಗಳ ಸಂಘ, ಶಿಕ್ಷಣ ಕ್ಷೇತ್ರದ ಸಂಘ, ಬಂಜಾರ ಸಮಾಜ , ವೀರಶೈವ ಸಮಾಜ, ಬ್ರಹ್ಮಣ ಸಮಾಜ ಅನೇಕರು ಪ್ರತಿಭಟಣೆ ಮೆರೆವಣಿಗೆಯಲ್ಲಿ ಭಾಗವಹಿಸಿದರು.
ಪಟ್ಟಣದ ಬಂದ್ ಕರೆಗೆ ಪಟ್ಟಣದ ಅಂಗಡಿ ಮುಂಗಟು ಖಾಸಗಿ ಶಾಲಾ, ಕಾಲೆಜುಗಳು ಹೋಟಲ್‌ಗಳು ಸಾರಿಗೆ ಸಂಪೂರ್ಣ ಬಂದ ಮಾಡಲಾಗಿತ್ತು ಈಶ್ವರ ದೇವಸ್ಥಾನದಿಂದ ಹೂರಟ ಮೆರವಣೆಗೆ ಘೋಷಣೆ ಹಾಕುತ್ತ ಬಸ ನಿಲ್ದಾಣ ವೃತ್ತದವರಗೆ ಸಾಗಿ ಅಲ್ಲಿ ಸಭೆಯಾಗಿ ಮಾರ್ಪಟು ಶಾಸಕ ಮಾನಪ್ಪ ವಜ್ಜಲ ಮಾತನಾಡಿ ಜಿಲ್ಲಾಸ್ಪತ್ರೆ ಆಗುವ ಎಲ್ಲಾ ಅರ್ಹತೆ ಹೊಂದಿದ್ದರು ರಾಜಕೀಯ ಕಾರಣಕ್ಕಾಗಿ ಸಿಂಧನೂರ ತಾಲೂಕಿಗೆ ಸ್ಥಳಾಂತರ ಮಾಡಲಾಗಿದೆ ಇದರಿಂದ ಕ್ಷೇತ್ರ ಜನರಿಗೆ ಅನ್ಯಾಯ ಮಾಡಿದಂತ ಆಗಿದೆ ಕಾರಣ ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಬಿಜೆಪಿ ಪಕ್ಷದ ಶಾಸಕರೊಂದಿಗೆ ಜಿಲ್ಲಾಸ್ಪತ್ರೆಗಾಗಿ ಹೋರಾಟ ಹಾಗೂ ಸರಕಾರದ ಮೇಲೆ ಒತ್ತಡ ಹಾಕಿ ಲಿಂಗಸುಗೂರಿಗೆ ಆಸ್ಪತ್ರೆ ಪಡೆಯುವುದಾಗಿ ತಿಳಿಸಿದರು.
ಈ ಸಭೆಯಲ್ಲಿ ಸಿಪಿಐಎಂ ರಾಜ್ಯಾಧ್ಯಕ್ಷರಾದ ಆರ.ಮಾನಸಯ್ಯ, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭೂಪನಗೌಡ ಕರಡಕಲ್, ಮಾದೇಶ ಸರ್ಜಾಪೂರ, ಲಿಂಗಪ್ಪ ಪರಂಗಿ, ವೀರಶೈವ ಸಮಾಜದ ಅಧ್ಯಕ್ಷ ಶರಣಪ್ಪಮೇಟಿ, ಶಾಂತಗೌಡ, ನ್ಯಾಯಾವಾದಿಗಳ ಸಂಘದ ಅಧ್ಯಕ್ಷ ಭೂಪನಗೌಡ, ಹನುಮಂತ ನಾಯಕ ಮಾತನಾಡಿ ಲಿಂಗಸುಗೂರ ಪಟ್ಟಣಕ್ಕೆ ಆದ ಅನ್ಯಾಯವನ್ನು ಸರಿಪಡಿಸಿ ಕ್ಷೇತ್ರದ ಮುಖಂಡರು, ಸರಕಾರದ ಮೇಲೆ ಒತ್ತಾಡ ಹಾಕಿ ಜಿಲ್ಲಾಸ್ಪತ್ರೆ ಮಂಜೂರು ಆಗುವಂತೆ ಮಾಡಬೇಕು ಎಂದು ಒತ್ತಾಯಿಸಿ ಮುಖ್ಯ ಮಂತ್ರಗೆ ಬರೆದ ಮನವಿ ಪತ್ರವನ್ನು ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿ ಮುಖಾಂತರ ಸಲ್ಲಿಸಿದರು.
ಪ್ರತಿಭಟನಾ ಮೆರವಣಿಗೆಯಲ್ಲಿ ವಿಜಯ ಪೋಳ್, ದುರಗಪ್ಪ ಸೋಮನಮರಡಿ, ಜಿಲ್ಲಾನಿ ಪಾಷಾ, ಅಮರೇಶಪ್ಪ ಹೂನೂರ, ಹನುಮಂತ ಕುಣೆಕೆಲ್ಲೂರು, ನಾಗರಾಜ ಗಸ್ತಿ, ಶಿವರಾಜ ನಾಯ್ಕ, ಪ್ರಭುಲಿಂಗ ಮೇಗಲಮನಿ, ತಿಮ್ಮಾರೆಡ್ಡಿ, ಗಿರಿಮಲ್ಲಣ್ಣಗೌಡ ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಲೆಕ್ಕಿಹಾಳ,ಮಹಿಳಾ ಘಟಕದ ಅಧ್ಯಕ್ಷೆ ಜೋತಿ ಸುಂಕದ, ಬಾಲನಗೌಡ, ಕಾಂಗ್ರೆಸ್ಸ ಮುಖಂಡ ಮಹ್ಮದ ರಫಿ, ಗುಂಡಪ್ಪ ನಾಯಕ, ಸಿಸಿ ಕರಡಕಲ ವಕೀಲರು, ಲಾಲಪ್ಪ ರಾಠೋಡ, ಶಿವುಪುತ್ರಗೌಡ ನಂದಿಹಾಳ,ಅಂಜನೆಯ ಭಂಡಾರಿ, ಬಾಬ ಜಾನಿ, ಹನುಮಂತ ಬಡಗೇರ, ಸಂಗಣ್ಣಗೌಡ ಹಾಗೂ ಇತರರು ಇದ್ದರು.

WhatsApp Group Join Now
Telegram Group Join Now
Share This Article