ನಾಗರಾಳ:ನಾಟಕ ಬರಹಗಾರರ ಪದಗ್ರಹಣ ಕಾರ್ಯಕ್ರಮ,ನಾಟಕದಿಂದ ಸಮಾಜ ಸುಧಾರಣೆ ಸಾಧ್ಯ, ಬರಹಗಾರರು ದುಶ್ಚಟಕ್ಕೆ ಬಲಿಯಾಗದೆ ಆರೋಗ್ಯವನ್ನು ಕಾಪಾಡಿಕೊಂಡು ನಾಡಿಗೆ ಉತ್ತಮಸೇವೇ ನೀಡಬೇಕು-ಕಲ್ಲಯ್ಯಜ್ಜ

Laxman Bariker
ನಾಗರಾಳ:ನಾಟಕ ಬರಹಗಾರರ ಪದಗ್ರಹಣ ಕಾರ್ಯಕ್ರಮ,ನಾಟಕದಿಂದ ಸಮಾಜ ಸುಧಾರಣೆ ಸಾಧ್ಯ, ಬರಹಗಾರರು ದುಶ್ಚಟಕ್ಕೆ ಬಲಿಯಾಗದೆ ಆರೋಗ್ಯವನ್ನು ಕಾಪಾಡಿಕೊಂಡು ನಾಡಿಗೆ ಉತ್ತಮಸೇವೇ ನೀಡಬೇಕು-ಕಲ್ಲಯ್ಯಜ್ಜ
WhatsApp Group Join Now
Telegram Group Join Now

ನಾಗರಾಳ:ನಾಟಕ ಬರಹಗಾರರ ಪದಗ್ರಹಣ ಕಾರ್ಯಕ್ರಮ,ನಾಟಕದಿಂದ ಸಮಾಜ ಸುಧಾರಣೆ ಸಾಧ್ಯ,
ಬರಹಗಾರರು ದುಶ್ಚಟಕ್ಕೆ ಬಲಿಯಾಗದೆ ಆರೋಗ್ಯವನ್ನು ಕಾಪಾಡಿಕೊಂಡು ನಾಡಿಗೆ ಉತ್ತಮಸೇವೇ ನೀಡಬೇಕು-ಕಲ್ಲಯ್ಯಜ್ಜ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ನಾಟಕ ಬರಹಗಾರರು ಸಮಾಜದ ದೋಷಗಳನ್ನು ಕಳೆಯಲು ನಾಟಕದ ಪಾತ್ರಗಳ ಮೂಲಕ ಸಮಾಜಕ್ಕೆ ತಿಳಿಸಿಕೊಡುವ ಬದುದೊಡ್ಡ ಕಾರ್ಯಮಾಡುತ್ತಿದ್ದು ಅವರು ದುಶ್ಚಟಕ್ಕೆ ಬಲಿಯಾಗದೆ ತಮ್ಮ ಆರೋಗ್ಯವನ್ನು ಕಾಲಾಡಿಕೊಂಡು ನಾಡಿಗೆ ಉತ್ತಮಸೇವೆ ನೀಡಬೇಕು ಎಂದು ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಡಾ ಕಲ್ಲಯ್ಯಜ್ಜನವರು ಹೇಳಿದರು

ಅವರು ತಾಲೂಕಿನ ನಾಗರಾಳ ಗ್ರಾಮದಲ್ಲಿ ಕರ್ನಾಟಕ ರಾಜ್ಯ ನಾಟಕ ಬರಹಗಾರರ ಸಂಘ ಬೆಂಗಳೂರು ಜಿಲ್ಲಾ ಘಟಕ ರಾಯಚೂರು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ,ನಾಟಕಪುಸ್ತಕ ಬಿಡುಗಡೆ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ೨೯೯೦ನೇ ತುಲಾಭಾರ ಸವೀಕರಿಸಿ ಮಾತನಾಡುತ್ತಾ ರಾಜಾಶ್ರಯದಲ್ಲಿದ್ದಂತಹ ಸಂಗೀತನಾಟಕ,ಕಾವ್ಯ ಮೊದಲಾದವುಗಳನ್ನು ಅರಮನೆಯಿಂದ ಗುರುಮನೆಗೆ ಅಂದರೆ ಜನಸಾಮಾನ್ಯರ ಹತ್ತಿರ ತರುವ ಕೆಲಸವನ್ನು ಹಾನಗಲ್ ಕುಮಾರಸ್ವಾಮಿಗಳು,ಪಂ, ಪಂಚಾಕ್ಷರಿ ಗವಾಯಿಗಳು ಹಾಗೂವೀರೇಶ್ವರ ಪುಣ್ಯಾಶ್ರಮದ ಪುಟ್ಟರಾಜ ಗುರುಗಳು ಬಹುದೊಡ್ಡ ಕೆಲಸವನ್ನು ಮಾಡಿದ್ದಾರೆ ಸಾವಿರಾರು ಅನಾಧ,ಅಂಧ ವಿಕಲಹೀನರಿಗೆ ಭಿಕ್ಷೆ ಪಾತ್ರೆಯನ್ನು ಬಿಡಿಸಿ ಸಂಗೀತ ಸಾಹಿತ್ಯದ ಅಕ್ಷಯ ಪಾತ್ರೆಯನ್ನು ನೀಡಿದ್ದಾರೆ ನಾಟಕದ ಪಾತ್ರಗಳ ಮೂಲಕ ಕವಿ ಸುವಿಚಾರಗಳನ್ನು ತಿಳಿಸಲು ಯತ್ನಿಸುತ್ತಾನೆ ಸಮಾಜವನ್ನು ಏನಾದರು ಸುಧಾರಣೆ ಮಾಡಲು ಸಾಧ್ಯವಿದ್ದರೆ ಅದು ಕವಿಗಳಿಂದ ಮಾತ್ರ ಸಾಧ್ಯ ನಾಗರಾಳದಂತಹ ಕುಗ್ರಾಮದಲ್ಲಿ ನಿರುಪಾದಿ ಕವಿಗಳು ಬಹುದೊಡ್ಡ ಕಾರ್ಯಕ್ರಮ ಹಮ್ಮಿಕೊಂಡು ಉತ್ತಮಸೆವೆ ಮಾಡಿದ್ದಾರೆ ಎಂದರು
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾತಾ ಮಾಣಿಕೇಶ್ವರಿ ಲಿಂಗಸಗೂರು ಶಾಖಾಮಠದ ಮಾತಾ ನಂದೀಕೇಶ್ವರಿ ಅಮ್ಮನವರು ಮಾತನಾಡಿ ಮನುಷ್ಯನ ಮನಸ್ಸು ಪಕ್ವವಾಗಲು ಗುರುಗಳ ಬೆಳಕು ಅಗತ್ಯವಾಗಿದ್ದು ಅಂತಹ ಗುರುವಿನ ಬೆಳಕು ಕವಿಗಳ ಮೇಲೆ ಇರಲಿ ಉತ್ತಮ ಬರವಣಿಗೆ ಬರಲಿ ಎಂದು ಆಶಿಸಿದರು
ಆಧ್ಯಾತ್ಮಿಕ ಚಿಂತಕರು ನಾಟಕ ರಚನೆಕಾರರಾದ ಕಾಕರಗಲ್ ಹನ್ಮಂತ್ರಾಯ ಮಾತನಾಡುತ್ತಾ ನಾಟಕ ಬರೆಯುವವರಿದ್ದು ಆದರೆ ಸಂಘ ರಚನೆಯಾಗಿರಲಿಲ್ಲ ಇದೀಗ ನಾಟಕ ಬರಹಗಾರರ ಸಂಘ ರಚನೆಯಾಗಿದ್ದು ಕಲವಾದರಿಗೆ ಆಸರೆಯಾಗುವ ಕೆಲಸ ಮಾಡಲಿ ಎಂದು ಹೇಳಿದರು ನಂತರ ತಿಮ್ಮಾಪುರ ಕಲ್ಯಾಣಾಶ್ರಮದಮಹಾಂತಸ್ವಾಮಿಗಳು ಅನುಭವ ನೀಡಿದರು
ವೀರೇಶ್ವರ ಪುಣ್ಯಾಶ್ರಮದ ಡಾ ಕಲ್ಲಯ್ಯಜ್ಜ ಹಾಗೂ ಅಂಕಲಿಮಠದ ಶ್ರೀಗಳಿಗೆ ತುಲಾಭಾರ ಮಾಡಲಾಯಿತು ನಂತರ ವಿವಿಧ ಕ್ಷೇತ್ರದ ಸಾಧಕರಿಗೆ ರಾಜ್ಯಮಟ್ಟದ ಪ್ರಶಸ್ತಿಗಳನ್ನು ಪ್ರಧಾನ ಮಾಡಲಾಯಿತು
ಅಲ್ಲದೆ ನಿರುಪಾದಿ ಕವಿಗಳ ಚನ್ನಿಯ ಚಲ್ಲಾಟ ಗೌಡನ ಆರ್ಭಟ, ಶಿವರಡ್ಡಿ ಸರ್ಣಣಗೌಡ್ರ ಭೂತಲದಿನ್ನಿಯವರ ಪ್ರೀತಿ ಹೋದರು ಸ್ನೇಹ ಬೇಕು, ದುರುಗೇಶ ಬೈಲಗುಡ್ಡರವರ ಪ್ರೇಮದ ಹುಚ್ಚು ಸೇಡಿನ ಕಿಚ್ಚು ನಾಟಕಗಳ ಪುಸ್ತಕ ಬಿಡುಗಡೆಯಾದವು ನಾಟಕ ರಚನೆಕಾರರ ರಾಜ್ಯಾಧ್ಯಕ್ಷ ಶಂಕರ ಹೂವಿನಹಿಪ್ಪರಗಿ ಅಧ್ಯಕ್ಷತೆವಹಿಸಿದರು
ಪ್ರಾಧ್ಯಾಪಕ ಖಾಜಾವಲಿ ಈಚನಾಳ ಹಾಗೂ ಶರಣಬಸವ ಅತ್ನೂರು ಸ್ವಾಗತಿಸಿದರು ಶಶಿನಾ ಚಿಕ್ಕಹೆಸರೂರು ನಿರೂಪಿಸಿದರು ರಮೇಶ ಗುತ್ತೇದಾರ ಪ್ರಾಸ್ತಾವಿಕವಾಗಿ ಮಾತನಾಡಿದರು
ಈ ಸಂದರ್ಭದಲ್ಲಿ ಕುಮಾರೆಪ್ಪ ಹೊಳೆಯಾಚೆ, ಪಂಚಾಕ್ಷರಿ ದೊಡ್ಡಮನಿ, ಎಸ್ ಆರ್ ರಸೂಲ್,ಬಸವರಾಜ ಪಂಚಗಲ್, ಪ್ರೇಮಾ ರಾಜುತಾಳಿಕೋಟಿ,ನಿರುಪಾದಿ ಕವಿಗಳು ಸೇರಿದಂತೆ ಗ್ರಾಮದ ಮುಖಂಡರು ಕವಿಗಳು ಕಲಾವಿದರು ಸೇರಿದಂತೆ ಇದ್ದರು

WhatsApp Group Join Now
Telegram Group Join Now
Share This Article