ರಸ್ತೆಯ ಮೇಲೊಂದು ರಸ್ತೆ,ಇದು ಭೂಸೇನಾ ನಿಗಮದ ಕರಾಮತ್ತು, ಕಳಪೆ ಆರೋಪ!!?
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ತಾಲೂಕಿನ ಕರಡಕಲ್ ತಾಂಡಾದಲ್ಲಿ ಭೂಸೇನಾ ನಿಗಮದಿಂದ ನಿರ್ಮಾಣವಾಗಿರುವ ಸಿಸಿ ರಸ್ತೆ ಮೊದಲಿನ ಸಿಸಿ ರಸ್ತೆಯ ಮೇಲೆ ಮಾಡಿದ್ದು ಅದುಕೂಡ ಕಳಪೆಯಾಗಿದೆ ಎಂದು ನಿವಾಸಿಗಳ ಆರೋಪವಾಗಿದೆ
ಭೂಸೇನಾ ನಿಗಮವು ತಾಲೂಕಿನಲ್ಲಿ ಹಲವಾರು ಕಡೆಯಲ್ಲಿ ಕಾಮಗಾರಿಗಳನ್ನು ನಿಯಮಬಾಹಿರವಾಗಿ ಮಾಡಲಾಗುತ್ತಿದೆ ಎನ್ನುವ ಸಾಕಷ್ಟು ಆರೋಪಗಳು ಕೇಳಿಬರುತ್ತಿವೆ ಅದರ ಬೆನ್ನ ಹಿಂದೆಯೆ ಎಂಬಂತೆ ತಾಲೂಕಿನ ಕರಡಕಲ್ ತಾಂಡಾದಲ್ಲಿ ರಸ್ತೆಯ ಮೇಲೆ ಮತ್ತೊಂದು ನಾಮಾಕಾವಸ್ಥೆ ಎಂಬಂತೆ ಕಾಮಗಾರಿ ಮಾಡುವುದರ ಮೂಲಕ ಸರಕಾರಿ ಹಣ ದುರ್ಬಳಕೆ ಮಾಡಿದೆ ಎನ್ನುವ ಬಲವಾದ ಆರೋಪಗಳು ಕೇಳಿ ಬರುತ್ತಿವೆ
ಸುಮಾರು ನಾಲ್ಕೈ ದು ವರ್ಷಗಳ ಹಿಂದೆ ಇದೆ ತಾಂಡಾದ ಸದರಿ ಸ್ಥಳದಲ್ಲಿಯೆ ಸುಮಾರು ೧೦ ಲಕ್ಷ ಹಣದಲ್ಲಿ ತಾಂಡಾ ಅಭಿವೃದ್ದಿ ನಿಗಮದಿಂದ ಮಂಜೂರಿಯಾಗಿದ್ದ ಸಿಸಿರಸ್ತೆಯನ್ನು ನಿರ್ಮಾಣ ಮಾಡಲಾಗಿತ್ತು ಅದು ಇನ್ನು ಉತ್ತಮವಾಗಿರುವಾಗಲೆ ಭೂಸೇನಾ ನಿಗಮವು ಅದೆ ರಸ್ತೆಯ ಮೇಲೆಯೆ ಪುನಃ ಕಾಮಗಾರಿ ಮಾಡಲಾಗಿದೆ ಎಂದು ತಾಂಡಾದ ನಿವಾಸಿ ಪಾಂಡಪ್ಪ ಆರೋಪಿಸುತ್ತಾರೆ
ಸದರಿ ತಾಂಡಾದಲ್ಲಿ ಭೂಸೇನಾ ನಿಗಮವು ೨೦೨೪-೨೫ನೇ ಸಾಲಿನ ಕಾಲೋನಿ ಅಭಿವೃದ್ದಿ ಯೋಜನೆಯಲ್ಲಿ ಸುಮಾರು ೨೫ ಲಕ್ಷ ಹಣದಲ್ಲಿ ಈ ಹಿಂದೆ ನಿರ್ಮಾಣ ಮಾಡಿದ ರಸ್ತೆಯ ಮೇಲೆಯೆ ತಾಂಡಾದ ಸಮುದಾಯಭವನದಿಂದ ಅಮರೇಶನ ಮನೆಯವರೆಗೆ ಸಿಸಿರಸ್ತೆಯನ್ನು ನಿರ್ಮಾಣ ಮಾಡಲಾಗಿದೆ ಎಂದು ಪಾಂಡಪ್ಪ ಆರೋಪಿಸುತ್ತಾರೆ
ನೂತನ ರಸ್ತೆ ನಿರ್ಮಾಣ ಮಾಡಬೇಕಾದರೆ ಹಳೆಯರಸ್ತೆಯನ್ನು ಅಗೆದು ಪುನಃ ಅಗೆತ ಮಾಡಿ ರಸ್ತೆ ಮಾಡುವುದು ಸಾಮಾನ್ಯ ಆದರೆ ಇಲ್ಲಿ ಮೊದಲೆ ಇರುವ ಸಿಸಿರಸ್ತೆಯ ಮೇಲೆಯೆ ನಾಮಾಕಾವಸ್ಥೆ ಎಂಬಂತೆ ಸಿಸಿಯನ್ನು ಹಾಕಲಾಗಿದ್ದು ಅದು ತೀರಾ ಕಳಪೆಯಾಗಿದೆ ಎಂದು ಆರೋಪಗಳು ಕೇಳಿ ಬರುತ್ತವೆ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸೂಕ್ತಕ್ರಮ ಜರುಗಿಸಿ ಕ್ರಮವಹಿಸಬಹುದೆ ಕಾದುನೋಡಬೇಕು