ನಿವೃತ್ತ ನೌಕರರ ಸಹಕಾರಿ ಉದ್ಘಾಟನೆ: ಸಹಕಾರಿ ಸಂಘ ಬೆಳೆಯಲು ಸಾಕಷ್ಟು ಪರಿಶ್ರಮವಿರಬೇಕು-ಬಯ್ಯಾಪುರ

Laxman Bariker
ನಿವೃತ್ತ ನೌಕರರ ಸಹಕಾರಿ ಉದ್ಘಾಟನೆ: ಸಹಕಾರಿ ಸಂಘ ಬೆಳೆಯಲು ಸಾಕಷ್ಟು ಪರಿಶ್ರಮವಿರಬೇಕು-ಬಯ್ಯಾಪುರ
WhatsApp Group Join Now
Telegram Group Join Now

ನಿವೃತ್ತ ನೌಕರರ ಸಹಕಾರಿ ಉದ್ಘಾಟನೆ:
ಸಹಕಾರಿ ಸಂಘ ಬೆಳೆಯಲು ಸಾಕಷ್ಟು ಪರಿಶ್ರಮವಿರಬೇಕು-ಬಯ್ಯಾಪುರ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ಯಾವುದೆ ಸಹಕಾರಿ ಸಂಘ ಉನ್ನತವಾಗಿ ಬೆಳೆಯಬೇಕಾದರೆ ಸತತ ಪ್ರಯತ್ನ ಸಾಕಷ್ಟು ಪರಿಶ್ರಮವಿದ್ದಾಗಲೆ ಸಹಕಾರಿಗಳು ಬೆಳೆಯಲು ಸಾಧ್ಯವಾಗುತ್ತದೆ ಎಂದು ಎಂ,ಎಲ್ ಸಿ ಶರಣಗೌಡ ಪಾಟೀಲ್ ಬಯ್ಯಾಪುರ ಹೇಳಿದರು

ಅವರು ಪಟ್ಟಣದ ಈಶ್ವರ ದೇವಸ್ಥಾನದ ಸಭಾಂಗಣದಲ್ಲಿ ಲಿಂಗಸಗೂರು ಸರಕಾರಿ ನಿವೃತ್ತ ನೌಕರರ ಸಂಘದಿAದ ಏರ್ಪಡಿಸಿದ ನೂತನ ಸಹಕಾರಿ ಸಂಘ ಉದ್ಘಾಟಿಸಿ ಮಾತನಾಡಿದ ಅವರು ಇಂದು ಸಾಕಷ್ಟು ಪ್ರಮಾಣದಲ್ಲಿ ಸಹಕಾರಿ ಸಂಘಗಳು ಉದ್ಘಾಟನೆಯಾಗುತ್ತಿದ್ದು ಕೆಲವು ಯಥಾಸ್ಥಿತಿಯಲ್ಲಿ ಇವೆ ಕೆಲವು ಮಾತ್ರ ಅಭಿವೃದ್ದಿಯಾಗಿವೆ ಅದಕ್ಕೆ ಮುಖ್ಯಕಾರಣ ಅದರ ನಿರ್ಮಾತೃಗಳು ತೆಗೆದುಕೊಳ್ಳುವ ನಿರ್ಧಾಗಳೆ ಕಾರಣಗಳು
ಸರಕಾರಿ ನಿವೃತ್ತರು ಸೇರಿಕೊಂಡು ಹತ್ತುಲಕ್ಷ ಬಂಡವಾಳ ಹಾಕಿ ಸಹಕಾರಿ ಸಂಸ್ಥೆಯನ್ನು ಪ್ರಾರಂಭ ಮಾಡಿದ್ದಾರೆ ಮೊದಲನೆವರ್ಷ ಸಆಕಷ್ಟು ಖರ್ಚು ಇರುತ್ತದೆ ಲಾಭವಾಗುವುದಿಲ್ಲ ಅದರ ಲಾಭ ಸುಮಾರು ಮೂರನೆ ವರ್ಷದಿಂದ ಪ್ರಾರಂಭವಾಗುತ್ತದೆ ಅದರ ಆಡಳಿತಾಧಿಕಾರಿ ಉತ್ತಮವಾಗಿದ್ದರೆ ಸಹಕಾರಿ ಚನ್ನಾಗಿ ನಡೆಯುತ್ತದೆ ಮತ್ತು ಅದರ ಸದಸ್ಯರು ಆಗಾಗ್ಗೆ ಲಾಭ ನಷ್ಟಗಳ ಬಗೆಗೆ ತಿಳಿಯುತ್ತಲೆ ಇರಬೇಕು ಯಾಕೆಮದರೆ ಕೇವಲ ಮುಖ್ಯಕಾರ್ಯನಿರ್ವಾಹಕರ ಮೇಲೆ ಬಿಟ್ಟರೆ ಮುಳುಗಿದ ಸಹಕಾರಿಗಳು ಇವೆ ಎಂದು ಕಟುವಾಗಿಯೆ ಹೇಳಿದರು ಅಲ್ಲದೆ ಸಾಲ ನೀಡುವಾಗ ಅವರ ಆಸ್ತಿ ಅವರು ಸಾಲವನ್ನು ಮರಳಿ ತುಂಬುವ ಸಾಮರ್ಥ್ಯವನ್ನು ಗ್ರಹಿಸಿ ಸಾಲ ನೀಡಬೇಕು ಇಲ್ಲವಾದರೆ ಸಾಲ ಸಕಾಲಕ್ಕೆ ಮರಳಿ ಬರುವುದು ತೊಂದರೆಯಾಗುತ್ತದೆ ಇದರಲ್ಲಿ ಬಂಧು ಬಳಗ ಎಂದು ಮೃಧುಧೋರಣೆ ಸಲ್ಲದು ಲೆಕ್ಕಪತ್ರ ಮಾತ್ರ ಚೊಕ್ಕವಾಗಿರಬೇಕು ಸೌಹಾರ್ದಗಳ ಮೇಲೆ ರಾಜ್ಯ ಸರಕಾರದ ನಿಯಂತ್ರಣ ಇರುವುದಿಲ್ಲ ಕೆಲವೊಮ್ಮೆ ಅವರು ದಿವಾಳಿಯಾದಾಗ ಕೂಡಿಟ್ಟ ಹಣ ಮರಳಿ ಬರುವುದು ತೊಂದರೆಯಾಗುತ್ತದೆ ಅದಕ್ಕಾಗಿ ಬಡ್ಡಿಗೆ ನೀಡುವಾಗ ಸಂದರ್ಭವನ್ನು ನೋಡಿಕೊಂಡು ಹಿತಮಿತ ಬಡ್ಡಿ ನೀಡುವುದು ಸೂಕ್ತವಾಗಿದೆ ಸೇರಿದಂತೆ ಹಿತನುಡಿಗಳನ್ನು ನುಡಿದರು
ನಿವೃತ್ತ ನೌಕರರ ಸಹಕಾರಿ ಸಂಘದ ಅಧ್ಯಕ್ಷರಾದ ಅಮರೇಶಪ್ಪ ಹೂನೂರು ಮಾತನಾಡುತ್ತಾ ನಮಗೆ ಸಾಲಕೊಡುವುದು ಹಾಗೂ ಅದನ್ನು ವಸೂಲಿ ಮಾಡುವುದು ಎರಡು ಗೊತ್ತಿದ್ದು ಲೆಕ್ಕಪತ್ರದಲ್ಲಿ ಪಾರದರ್ಶಕವನ್ನು ಕಾಪಾಡಿಕೊಂಡು ಹೋಗಲಾಗುವುದು ಹಣಹಾಕಿದ ಎಲ್ಲರಿಗೂ ನ್ಯಾಯ ಒದಗಿಸುವ ಕೆಲಸವನ್ನು ಸಹಕಾರಿ ಸಂಘ ಮಾಡಲಿದೆ ಎಂದು ಭರವಸೆಯನ್ನು ನೀಡಿದರು
ಈ ಸಂದರ್ಭದಲ್ಲಿ ಮಹಾದೇವಪ್ಪ ಏಗನೂರು, ಬಸವರಾಜಗೌಡ ಗಣೇಕಲ್,ಪಾಮಯ್ಯ ಮುರಾರಿ, ಭೂಪನಗೌಡ ಕರಡಕಲ್,ಹಾಜಿಬಾಬು ಕಲ್ಯಾಣಿ,\
ಸಹಕಾರಿ ಸಂಘದ ಅಧ್ಯಕ್ಷರಾದ ಶರಣಬಸವರಾಜ ನಾಡಗೌಡ,ಮಾತನಾಡಿದರು ಸಿದ್ರಾಮಪ್ಪ ಕಾಡ್ಲೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು
ಈ ಸಂದರ್ಭದಲ್ಲಿ ಭೀಮಣ್ಣನಾಯಕ, ಹಾಜಿಬಾಬು ಕಲ್ಯಾಣಿ, ಶಶಿಧರಗೌಡ ಪಾಟೀಲ್, ಯಲ್ಲಪ್ಪ ಅಲಬನೂರು,ಸೇರಿದಂತೆ ಇದ್ದರು ಸುರೇಶ ಕುಲಕರ್ಣಿ ಸಂಗಡಿಗರು ನಿರೂಪಿಸಿದರು

WhatsApp Group Join Now
Telegram Group Join Now
Share This Article