ನೆಲೆನಿಂತ ಅಲೆಮಾರಿ…ಮಕ್ಕಳಿಗೆ ಜನನ ಪ್ರಮಾಣಪತ್ರ ಇಲ್ಲದೆ ದಾಖಲಾತಿಗೆ ತೊಂದರೆ, ಪ್ರವೇಶಕ್ಕೆ ದಾರಿ ಯಾವುದಯ್ಯ!!?
ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗಿಲ್ಲ ರೇಷನ್, ಜಾತಿ-ಆದಾಯ ಪತ್ರ, ಆಧಾರ್ ಕಾರ್ಡ್!
ಕಲ್ಯಾಣ ಕರ್ನಾಟಕ ವಾರ್ತೆ
ಕೂಡ್ಲಿಗಿ: ಬೀದಿ ಬೀದಿ ಅಲೆದು ಉಪಜೀವನ ಮಾಡುವ ಅಲೆಮಾರಿ ಮಕ್ಕಳಿಗೆ ಅಕ್ಷರ ಜ್ಞಾನ ನೀಡಲು ಶಾಲೆಗೆ ದಾಖಲಾತಿ ಪಡೆಯಲು ಇವರಿಗೆ ಜನನ ಪ್ರಮಾಣಪತ್ರವೇ ಇಲ್ಲ ಜನನ ಪ್ರಮಾಣಪತ್ರ ನೀಡದಿದ್ದರೆ ತಂತ್ರಾಂಶದಲಿ ಮಕ್ಕಳ ಹೆಸರು ದಾಖಲಾತಿಗೆ ತೊಂದರೆ ಯಾಗುತ್ತಿದ್ದು ತಾಲ್ಲೂಕಿನ ಹಲವಾರು ಅಲೆಮಾರಿ ಜನಾಂಗದ ಮಕ್ಕಳು ಸಮಸ್ಯೆ ಯನ್ನು ಹೆದರಿಸುತಿದ್ದು ಇವರನ್ನು ದಾಖಲಾತಿ ಮಾಡುವುದಾದರು ಹೇಗೆ ಎನ್ನುವ ಗೊಂದಲದ ಸಂಕಷ್ಟ ಶಿಕ್ಷಕರಿಗೆ ಎದುರಾಗಿದೆ
ಇಲಾಖೆ ಅಲೆಮಾರಿ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲು ಶಿಕ್ಷಣ ಇಲಾಖೆ 1ರಿಂದ 7ನೇ ತರಗತಿಯವರೆಗೆ ಯಾವುದೇ ರೀತಿಯ ನಿವಾಸಿ ದೃಢೀಕರಣ ಪತ್ರ, ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಇಲ್ಲದೆ ಪರದಾಡುತ್ತಿರುವ ಅಲೆಮಾರಿ ಜನರ ಮಕ್ಕಳಿಗೆ ಶಿಕ್ಷಣಕ್ಕೆ ಒತ್ತು ಕೊಟ್ಟಿದೆ. ಪಟ್ಟಣದ ಕೋರಖಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ತಾಲ್ಲೂಕಿನ ಹಲವಾರು ಶಾಲೆಯಲಿ ಕಂಡುಬಂದ ದೃಶ್ಯ ಹೌದು ಕೂಡ್ಲಿಗಿ ಪಟ್ಟಣದ ಸಂಡೂರು ರಸ್ತೆಯಲ್ಲಿ ಹಲವು ವರ್ಷಗಳಿಂದ ಅಲೆಮಾರಿ ಜನಾಂಗದವರು ವಾಸ ಮಾಡುತ್ತಿದ್ದು ಅವರಿಗೆ ಯಾವುದೇ ರೀತಿಯ ವೋಟರ್ ಐಡಿ, ಆಧಾರ್ ಕಾರ್ಡ್, ನಿವಾಸಿ ದೃಢೀಕರಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ವಾಸಿಸಲು ಮನೆ, ವಿದ್ಯುತ್, ಕುಡಿಯಲು ನೀರು ಸೇರಿದಂತೆ ಇತರೆ ಸರಕಾರದ ಸೌಲಭ್ಯಗಳು ಇಲ್ಲದೆ ಅಲೆಮಾರಿ ಜನರು ಸಂಕಷ್ಟ ಅನುಭವಿಸುತಿದ್ದಾರೆ ಮಕ್ಕಳಿಗೆ ಅಕ್ಷರ ಜ್ಞಾನ ನೀಡಬೇಕೆಂದರೆ ಜನನ ಪ್ರಮಾಣಪತ್ರ ದ ಸಂಕಷ್ಟ ಎದುರಾಗಿದೆ
ಮಕ್ಕಳು ಶಿಕ್ಷಣ ಪಡೆದರೆ ಮಾತ್ರ ಬದುಕು ಬೆಳಕಾಗಲು ಸಾಧ್ಯ ಆದರೆ ಇಲ್ಲಿ ಊರಿಂದ ಊರಿಗೆ ಅಲೆಯುವ ಇವರಿಗೆ ಜನನ ಪತ್ರ ಪಡೆಯುವುದಾದರು ಎಲ್ಲಿ ಇಂತಹ ಅಲೆಮಾರಿ ಜನಾಂಗದ ಮಕ್ಕಳು ತಾಲ್ಲೂಕಿನ ಲ್ಲಿ ಸುಮಾರು 1600 ಇರಬಹುದೆಂದು ಅಂಕಿ ಅಂಶಗಳು ಸ್ಪಷ್ಟ ಪಡಿಸುತಿದ್ದು ಇವರ ದಾಖಲಾತಿಗೆ ಶಿಕ್ಷಣ ಇಲಾಖೆ ಏನಾದರು ಪರಿಹಾರ ಕಲ್ಪಿಸಿ ದಾರಿ ಹುಡಕಬಹುದೆ ಕಾದು ನೋಡಬೇಕಾಗಿದೆ
ಇದುವರೆಗೂ ಯಾವುದೇ ರೀತಿಯ ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ನಿವಾಸಿ ದೃಢೀಕರಣ ಸೇರಿದಂತೆ ಇತರೆ ಯಾವುದೇ ರೀತಿಯ ದಾಖಲಾತಿಗಳು ಇರುವುದಿಲ್ಲ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಅನುಕೂಲ ಮಕ್ಕಳಿಗೆ ದೊರೆಯುತ್ತಿಲ್ಲ. ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿ ಮುಂದಿನ ತರಗತಿಗೆ ದಾಖಲಾಗಲು ದೃಢೀಕರಣ ಪತ್ರ, ಆಧಾರ್ ಕಾರ್ಡ್ ಕಡ್ಡಾಯ ಎಂದು ಪ್ರೌಢ ಶಾಲೆಯಲ್ಲಿ ಮುಖ್ಯಸ್ಥರು ಮಕ್ಕಳಿಗೆ ಪ್ರವೇಶಾತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ.
ಕೋಟ್ :
ಅಲೆಮಾರಿ ಜನಾಂಗದ ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದು ಅವರಿಗೆ ಯಾವುದೇ ರೀತಿಯ ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರಹಾಗೂ ಜನನ ಪ್ರಮಾಣಪತ್ರ ಸೇರಿದಂತೆ ಇತರೆ ಪ್ರಮಾಣ ಪತ್ರಗಳು ಇರುವುದಿಲ್ಲ ಎಂಬುದು ಮಾಹಿತಿ ನನ್ನ ಗಮನಕ್ಕೆ ಬಂದಿದೆ. ತಕ್ಷಣ ಶಾಲೆಗೆ ಹಾಗೂ ಅಲೆಮಾರಿ ಜನಾಂಗದವರು ವಾಸ ಮಾಡುತ್ತಿರುವ ಟೆಂಟ್ ಗಳಿಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದು, ಅಲೆಮಾರಿ ಜನಾಂಗದ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡುವೆ.
• ನೇತ್ರಾವತಿ ವಿ.ಕೆ ತಾಹಶೀಲ್ದಾರ್, ಕೂಡ್ಲಿಗಿ