*ಪತ್ರಕರ್ತನ ಮೇಲೆ ಹಲ್ಲೆಯತ್ನ ಖಂಡಿಸಿ ನಾಳೆ ಎಸ್ ಪಿ ಕಚೇರಿ ಮುಂದೆ ಪ್ರತಿಭಟನೆ*
ಕಲ್ಯಾಣ ಕರ್ನಾಟಕ ವಾರ್ತೆ
ರಾಯಚೂರು::ಯರಗೇರಾದ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ಮುಖ್ಯ ದ್ವಾರದಲ್ಲಿ ಬೆಂಕಿ ಬೆಳಕು ಪತ್ರಿಕೆ ವರದಿಗಾರ ಮುತ್ತಣ್ಣ ಹೇಳವರ್ ಮೇಲೆ ಸಿಂಧನೂರು ಡಿವೈಎಸ್ಪಿ ಬಿ. ಎಸ್. ತಳವಾರ್ ಹಲ್ಲೆಗೆ ಯತ್ನಿಸಿ ಅವಾಚ್ಶ ಶಬ್ದಗಳಿಂದ ನಿಂದಿಸಿದ ಘಟನೆಯನ್ನು ರಾಯಚೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ತೀವ್ರವಾಗಿ ಖಂಡಿಸುತ್ತದೆ.
ಪತ್ರಕರ್ತನ ಮೇಲೆ ಹಲ್ಲೆಗೆ ಯತ್ನಿಸಿ ತಳ್ಳಾಡಿ, ಎಳೆದೊಯ್ದು ಅವಾಚ್ಯ ಶಬ್ದಗಳಿಂದ ನಿಂದಿಸಿದ ಸಿಂಧನೂರು ಡಿ ವೈ ಎಸ್ ಪಿ ಮೇಲೆ ಕ್ರಮಕ್ಕೆ ಒತ್ತಾಯಿಸಿ ದಿನಾಂಕ :24-6-2025 ರಂದು ಬೆಳಿಗ್ಗೆ 11:30 ಗಂಟೆಗೆ ಎಸ್ಪಿ ಕಚೇರಿ ಮುಂದೆ ಪತ್ರಕರ್ತರ ಸಂಘಟನೆಯಿಂದ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗುವುದು. ಪತ್ರಕರ್ತ ಮಿತ್ರರು ಪ್ರತಿಭಟನೆಯಲ್ಲಿ ಭಾಗವಹಿಸಬೇಕೆಂದು ಕೋರುತ್ತೇವೆ.
*ಆರ್ ಗುರುನಾಥ್*
ಜಿಲ್ಲಾಧ್ಯಕ್ಷ
Kuwj ರಾಯಚೂರು
*ಎಂ ಪಾಷಾಹಟ್ಟಿ*
ಜಿಲ್ಲಾ ಪ್ರಧಾನ ಕಾರ್ಯದರ್ಶಿ
Kuwj ರಾಯಚೂರು