ಚಾಲಕ,ನಿರ್ವಾಹಕ-ಯುವಕನ ನಡುವೆ ವಾಗ್ವಾದ,ಶವವಿಟ್ಟು ಪ್ರತಿಭಟನೆ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ತಾಲೂಕಿನ ಹುನಕುಂಟಿ ಗ್ರಾಮದ ಯುವಕ ಹಾಗೂ ಚಾಲಕ,ನಿರ್ವಾಹಕರ ನಡುವೆ ವಾಗ್ವಾದ ನಡೆದು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದು ಗ್ರಾಮಸ್ಥರು ಬಸ್ ಡಿಪೋದ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸಿದ ಘಟನೆ ಜರುಗಿದೆ
ಲಿಂಗಸಗೂರಿನಿAದ ಸಜ್ಜಲಗುಡ್ಡ-ಬೆಂಗಳುರು ಬಸ್ ಹುನಕುಂಟಿ ಮಾರ್ಗವಾಗಿ ಸಾಗುವಾಗ ಯುವಕ ಮುಕ್ಕಣ್ಣ ಗ್ರಾಮದ ರಸ್ತೆಪಕ್ಕದಲಿ ಕುಳಿತಿರುವಾಗ ಬಸ್ ಚಲಿಸಿ ರಸ್ತೆಯ ನೀರು ಯುವಕನ ಮೇಲೆ ಬಿದ್ದಿರುವುದರಿಂದ ಸಿಟ್ಟಿಗೆದ್ದ ಯುವಕ ಚಾಲಕನಿಗೆ ಅವಾಚ್ಯವಾಗಿ ಬೈದಿದ್ದಾನೆಂದು ಹೇಳಲಾಗುತಿದ್ದು ಬಸ್ಸಿನ ಚಾಲಕ ಹಾಗೂ ನಿರ್ವಾಹಕ ಸೇರಿ ಯುವಕನೊಂದಿಗೆ ಜಗಳವಾಗಿದ್ದು ಕೊನೆಯಲ್ಲಿ ವಿಷಯ ಪೊಲೀಸ್ ಕಟ್ಟೆ ಹತ್ತಿದೆ ವಿಷಯವನ್ನು ತಿಳಿಗೊಳಿಸಲು ಪ್ರಯತ್ನಿಸಿದರು ಫಲಕಾರಿಯಾಗದೆ ಯುವಕ ಕೊನೆಗೆ ಹೊಲಕ್ಕೆ ತೆರಳಿ ತಾನೆ ಲೈವ್ ಮಾಡುತ್ತಾ ಆತ್ಮಹತ್ಯೆ ಮಾಡಿಕೊಂಡಿದ್ದಾನೆAದು ಹೇಳಲಾಗುತಿದೆ
ವಿಷಯ ತಿಳಿದ ಗ್ರಾಮಸ್ಥರ ಗಮನಕ್ಕೆ ಬರುತ್ತಲೆ ಯುವಕನ ಶವವನ್ನು ತೆಗೆದುಕೊಂಡುಬAದು ಪಟ್ಟನದ ಬಸ್ ಡಿಪೋ ಎದುರು ಶವವಿಟ್ಟು ಪ್ರತಿಭಟನೆ ನಡೆಸಿದ ಘಟನೆ ಜರುಗಿದೆ