ವ್ಯಕ್ತಿಯನ್ನು ಕೊಚ್ಚಿ ಕೊಲೆ ,ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಹಾಗೂ ಶ್ವಾನದಳ ತಂಡ ಭೇಟಿ, ಪರಿಶೀಲನೆ

Laxman Bariker
ವ್ಯಕ್ತಿಯನ್ನು ಕೊಚ್ಚಿ ಕೊಲೆ ,ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಹಾಗೂ ಶ್ವಾನದಳ ತಂಡ ಭೇಟಿ, ಪರಿಶೀಲನೆ
WhatsApp Group Join Now
Telegram Group Join Now

ವ್ಯಕ್ತಿಯನ್ನು ಕೊಚ್ಚಿ ಕೊಲೆ ,ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಹಾಗೂ ಶ್ವಾನದಳ ತಂಡ ಭೇಟಿ, ಪರಿಶೀಲನೆ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸುಗೂರು. ಜೂ. 5.- ತಾಲೂ ಕಿನ ಯರಗುಂಟಿ ಗ್ರಾಮದ ಬಸನಗೌಡ ತಂದೆ ಹನುಮನ ಗೌಡ ( 42) ಎಂಬ ವ್ಯಕ್ತಿಯನ್ನು,ಬುಧುವಾರ ರಾತ್ರಿ ಸಮಯದಲ್ಲಿ ಹಿರೇ ಉಪ್ಪೇರಿ ಸೀಮಾದ ಜಮೀನೊಂದರಲ್ಲಿ ದುಷ್ಕರ್ಮಿಗಳು ಕೊಚ್ಚಿ ಕೊಲೆಗೈದು ,ಆತನ ದ್ವಿಚಕ್ರ ವಾಹನವನ್ನು ಕಾಲುವೆಗೆ ಬಿಸಾಕಿದ್ದಾರೆ ಎನ್ನಲಾಗಿದೆ.

ಕೊಲೆ ನಡೆದ ಸ್ಥಳಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪುಟ್ಟ ಮಾದಯ್ಯ, ಡಿವೈಎಸ್ಪಿ ದತ್ತಾತ್ರೇಯ ಕಾರ್ನಾಡ್, ಪಿಐ ಪುಂಡಲೀಕ ಪಟ್ಟಾತರ್ ಹಾಗೂ ಶ್ವಾನ ದಳದ ತಂಡ ದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೃತ ಬಸನಗೌಡ ಎಂಬ ವ್ಯಕ್ತಿ ಬುಧುವಾರ ಸಂಜೆ 7:00 ಗಂಟೆಗೆ ತನ್ನ ಟಿ.ವಿ.ಎಸ್ ಎಕ್ಸೆಲ್ ಸೈಕಲ್ ಮೋಟಾರ್ ತೆಗೆದುಕೊಂಡು ಹೋಗಿದ್ದು ತಡರಾತ್ರಿಯಾದರೂ ಮನೆಗೆ ಬಾರದ ಕಾರಣ ಕುಟುಂಬಸ್ಥರು ಫೋನ್ ಮಾಡಿದ್ದು ಅದು ಸ್ವಿಚ್ ಆಫ್ ಆಗಿದ್ದರಿಂದ ಗಾಬರಿಗೊಂಡ ಕುಟುಂಬಸ್ಥರು ಬೆಳಗಿನ ಜಾವು ಹುಡುಕಾಡಿದಾಗ ಅನತಿ ದೂರದಲ್ಲಿರುವ ಪಾಳು ಬಿದ್ದ ಜಮೀನೊಂದರಲ್ಲಿ ಶವವಾಗಿ ಪತ್ತೆಯಾಗಿದ್ದು ಮೃತನ ಮೋಟಾರ್ ಸೈಕಲ್ ಕಾಲುವೆ ಯಲ್ಲಿ ಬಿಸಾಕಲಾಗಿದೆ.

ಮೃತಶವ ಬೋರಲಾಗಿ ಬಿದ್ದು ರಕ್ತಸ್ರಾವಾಗಿದ್ದರಿಂದ ದುಷ್ಕರ್ಮಿಗಳು ಅರಿತವಾದ ಆಯುಧದಿಂದ ಕೊಚ್ಚಿ ಕೊಲೆ ಮಾಡಿದ್ದಾರೆಂದು ಮೃತನ ಹೆಂಡತಿ ಲಿಂಗಸಗೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಮೃತ ಬಸನಗೌಡನ ಶವ ಪತ್ತೆಯಾದ ಅನತಿ ದೂರದಲ್ಲಿ ಕೊಡಲಿಯೊಂದು ಪತ್ತೆಯಾಗಿದ್ದು ಆ ಕೊಡಲಿ ಗೆ ರಕ್ತ ಅಂಟಿಕೊಂಡಿದ್ದು ದುಷ್ಕರ್ಮಿಗಳು ಅದೇ ಕೊಡಲಿಯಿಂದ ಮೃತನ ಕೊರಳಿಗೆ ಕೊಡಲಿಯಿಂದ ಕೊಚ್ಚಿ ಆತನನ್ನು ಕೊಲೆ ಮಾಡಲಾಗಿದೆ ಎಂಬ ಅನುಮಾನ ಕುಟುಂಬಸ್ಥರು ವ್ಯಕ್ತಪಡಿಸುತ್ತಿದ್ದಾರೆ.

ಬೆಳಿಗ್ಗೆ ಆತನ ಮಗ ಕೊಲೆಯ ವಿಚಾರ ತಿಳಿಸುತ್ತಿದ್ದಂತೆ ಕೊಲೆಯಾದ ಸ್ಥಳದಲ್ಲಿ ಕುಟುಂಬಸ್ಥರು ಜಮಾವಣೆಗೊಂಡಿದ್ದು ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಕೊಲೆಗೆ ಇನ್ನೂ ನಿಖರವಾದ ಕಾರಣ ತಿಳಿದು ಬಂದಿಲ್ಲ ಲಿಂಗಸುಗೂರು ಪೋಲಿಸರು ಪ್ರಕರಣವನ್ನು ದಾಖಲಿಸಿಕೊಂಡು ಕೊಲೆಗಾರರ ಪತ್ತೆಗಾಗಿ ಎಸ್ಪಿ ಪುಟ್ಟ ಮಾದಯ್ಯ ಮಾರ್ಗದರ್ಶನದಲಿ ಡಿವೈಎಸ್ಪಿ ದತ್ತಾತ್ರೆಯ ಕಾರ್ನಾಡ, ಪಿಐ ಪುಂಡಲೀಕ ಪಟ್ಟತ್ತರ ಹಾಗೂ ತಂಡ ತನಿಖೆ ನಡೆಸಿದ್ದಾರೆ.

WhatsApp Group Join Now
Telegram Group Join Now
Share This Article