ವಿದ್ಯಾಚೇತನ ಕಾಲೇಜು ಪ್ರವೇಶಕ್ಕೆ ಪಾಲಕರು ಭಯಪಡುವ ಅಗತ್ಯವಿಲ್ಲ-ಬಿರಾದಾರ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಸಾಮಾಜಿಕ ಜಾಲತಾಣದಲ್ಲಿ ಸಂಸ್ಥೆಯ ಪರವಾನಿಗಿ ಬಗೆಗೆ ಸತ್ಯಕ್ಕೆ ದೂರವಾದ ವಿಚಾರಗಳು ಹರಿದಾಡುತ್ತಿದ್ದು ಪಾಲಕರು ಯಾವುದಕ್ಕೂ ಭಯಪಡದೆ ತಮ್ಮ ಮಕ್ಕಳನ್ನು ಕಾಲೇಜಿಗೆ ಸೇರಿಸಬಹುದು ಎಂದು ಸಂಸ್ಥೆಯ ಕಾರ್ಯದರ್ಶಿ ಹನಮೇಶ ಬಿರಾದರ ಹೇಳಿದರು
ಅವರು ಪತ್ರಿಕೆಯೊಂದಿಗೆ ಮಾತನಾಡುತ್ತಾ ನಮ್ಮ ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಹೆಸರು ಮಾಡುತ್ತಾ ಮುನ್ನಡೆಯುತ್ತಿದೆ ಅದನ್ನು ಸಹಿಸದ ಕೆಲವರು ಹಲವಾರು ದಿನಗಳಿಂದ ಸಂಸ್ಥೆಯ ಬಗೆಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಅದಕ್ಕೆಲ್ಲ ಪಾಲಕರು ಭಯಪಡದೆ ತಮ್ಮ ಮಕ್ಕಳನ್ನು ಕಾಲೇಜಿಗೆ ಸೇರಿಸಬಹುದು
ಈಗಾಗಲೆ ಶಿಕ್ಷಣ ಇಲಾಖೆಯವರು ಪರಿಶೀಲನೆ ಮಾಡಿ ಆರೋಪಗಳು ಕೇಳಿಬಂದ ದಾಖಲಾತಿಗಳ ಖಚಿತತೆಗಾಗಿ ಮೇಲಾಧಿಕಾರಿಗಳಿಗೆ ಕಳುಹಿಸಲಾಗಿದ್ದು ಸ್ಥಳಿಯವಾಗಿ ಎಲ್ಲವು ಸರಿಇದೆ ಎಂದು ವರದಿಯನ್ನು ನೀಡಲಾಗಿದೆ ಅದಕ್ಕಾಗಿ ಪಾಲಕರು ಯಾವುದೆ ರೀತಿಯ ಭಯಪಡದೆ ವಿದ್ಯಾರ್ಥಿಗಳನ್ನು ಕಳುಹಿಸಬಹುದು ಎಂದು ಅವರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ