ಲಿಂಗಸ್ಗೂರು ತಾಲೂಕಿನಲ್ಲಿ; ನಿಲ್ಲದ ಅಕ್ರಮ ಮರಳು ದಂಧೆ ನಿತ್ಯ ಲಾರಿಗಳ ಮೂಲಕ ಅಕ್ರಮ ಮರಳು ಸಾಗಟ ಅಧಿಕಾರಿಗಳು ಮೌನ

Laxman Bariker
ಲಿಂಗಸ್ಗೂರು ತಾಲೂಕಿನಲ್ಲಿ; ನಿಲ್ಲದ ಅಕ್ರಮ ಮರಳು ದಂಧೆ  ನಿತ್ಯ ಲಾರಿಗಳ ಮೂಲಕ ಅಕ್ರಮ ಮರಳು ಸಾಗಟ ಅಧಿಕಾರಿಗಳು ಮೌನ
WhatsApp Group Join Now
Telegram Group Join Now

ಲಿಂಗಸ್ಗೂರು ತಾಲೂಕಿನಲ್ಲಿ; ನಿಲ್ಲದ ಅಕ್ರಮ ಮರಳು ದಂಧೆ

ನಿತ್ಯ ಲಾರಿಗಳ ಮೂಲಕ ಅಕ್ರಮ ಮರಳು ಸಾಗಟ ಅಧಿಕಾರಿಗಳು ಮೌನ

ವಿಶೇಷ ವರದಿ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸ್ಗೂರು : ಪಟ್ಟಣದ ಸುತ್ತಲಿನ ವಿವಿಧ ಗ್ರಾಮಗಳಲ್ಲಿ ನಿಯಮಗಳು ಮೀರಿ ಅಕ್ರಮ ಮರಳು ದಂಧೆಯನ್ನು ಅವ್ಯಾಹತವಾಗಿ ನಡೆದಿದೆ. ಲಿಂಗಸ್ಗೂರು ತಾಲೂಕು ಹಾಗೂ ಮುದಗಲ್ ಹೋಬಳಿಯಲ್ಲಿ ಪ್ರಾಕೃತಿಕ ಸಂಪತ್ತು ಹೇರಳವಾಗಿದೆ. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಅಧಿಕಾರಿಗಳ ನೆರಳಲ್ಲಿ ನಿತ್ಯ ಮರಳು ಸಾಗಿಸುತ್ತಿದ್ದು, ಇದಕ್ಕೆ ಕಡಿವಾಣವೇ ಇಲ್ಲದಂತಾಗಿದೆ. ಲಿಂಗಸ್ಗೂರು ತಾಲೂಕಿನಲ್ಲಿ ಅತಿ ಹೆಚ್ಚು ಅಕ್ರಮ ಮರಳು ಸಾಗಟ ನಡೆದಿದೆ ಹಾಗೂ ಮುದಗಲ್ ಹೋಬಳಿಯ ತಲೆಕಟ್ಟು, ವ್ಯಾಕರನಾಳ, ಮರಳಿ, ನಾಗಲಾಪುರ, ಹೂನೂರು, ನಾಗರಾಳ ಗ್ರಾಮಗಳಲ್ಲಿ ಸರ್ಕಾರಿ ಹಾಗೂ ಪಟ್ಟಾ ಭೂಮಿಗಳಲ್ಲಿ, ಹಳ್ಳ–ಕೊಳ್ಳ, ನದಿಪಾತ್ರದ ಜಮೀನು ಅಕ್ರಮವಾಗಿ ಮರಳು ಅಗೆಯಲಾಗುತ್ತಿದೆ. ಅಕ್ರಮ ಮರಳು ದಂಧೆ ಕಡಿವಾಣಕ್ಕೆ ತಹಶೀಲ್ದಾರ್‌ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸದಸ್ಯತ್ವದೊಂದಿಗೆ ಕಮಿಟಿ ರಚಿಸಲಾಗಿದ್ದು, ಇದುವರೆಗೂ ಯಾರೊಬ್ಬ ಅಧಿಕಾರಿಯೂ ಇತ್ತ ಗಮನ ಹರಿಸುವುದಿಲ್ಲ. ಇದರಿಂದ ಅವ್ಯಾಹತವಾಗಿ ಮರಳು ಮಾಫಿಯಾದ ಜಾಡು ಹೆಚ್ಚುತ್ತಲೇ ಇದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ದಕ್ಷತೆಯಿಂದ ಕಾರ್ಯನಿರ್ವಹಿಸುವ ಮೂಲಕ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಬೇಕು’ ಎಂಬುದು ಸ್ಥಳೀಯರ ಆಗ್ರಹವಾಗಿದೆ.

ಮರಳು ಮಾರಾಟ ಉದ್ಯಮದಲ್ಲಿ ಬಂಡವಾಳ ಕಡಿಮೆ; ಆದಾಯ ಅಧಿಕ

ಒಂದು ಲಾರಿ ಲೋಡ್ ಮರಳಿಗೆ ಸುಮಾರು ₹ 25 ರಿಂದ 30 ಸಾವಿರಕ್ಕೆ ಮಾರಾಟ ಮಾಡಲಾಗುತ್ತದೆ. ಬೇಡಿಕೆ ಹೆಚ್ಚಿರುವ ಸಂದರ್ಭದಲ್ಲಿ ಮರಳಿನ ಬೆಲೆ ದುಪ್ಪಟ್ಟಾಗಿರುತ್ತದೆ. ಮರಳು ದಂಧೆಕೊರರು ಸರ್ಕಾರಕ್ಕೆ ರಾಜಧನದ ಕಟ್ಟುತ್ತಿಲ್ಲ. ಇಲ್ಲಿ ಅಕ್ರಮವು ಅವ್ಯಾಹತವಾಗಿ ನಡೆಯುತ್ತಿರುವುದರಿಂದ ಯಾವುದೇ ರಾಜಧನವನ್ನು ಸರ್ಕಾರಕ್ಕೆ ಕಟ್ಟದೇ; ಅದನ್ನೇ ಸಂಬಂಧಪಟ್ಟ ಇಲಾಖೆಗಳಿಗೆ ತಿಂಗಳಿಗೆ ಇಂತಿಷ್ಟು ಕೊಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪ ಮಾಡಿದ್ದಾರೆ.

ಅಧಿಕಾರಿಗಳ ಮೌನ; ಮರಳು ನಿಷೇಧದ ವಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ಹಗಲಿರುಳು ರಾಜ್ಯ ಹೆದ್ದಾರಿ ಮುಖಾಂತರ ಅಕ್ರಮ ಮರಳು ಸಾಗಾಟ ನಿರಂತರವಾಗಿ ಸಾಗುತ್ತಿದೆ. ಈ ರೀತಿ ಕಾನೂನು ಬಾಹೀರ ಮರಳು ಮಾಫಿಯಾ ಮರು ಜೀವ ಪಡೆದಿದ್ದು, ಹಳ್ಳದ ತುಂಬೆಲ್ಲಾ ತಗ್ಗು, ದಿನ್ನೆಗಳು ಬಿದ್ದಿವೆ. ಹಳ್ಳದಲ್ಲಿ ಇದ್ದ ಗಿಡಮೂಲಿಕೆ ಔಷಧಿಗಳು ಹಾಳಾಗುತ್ತಿವೆ. ಬೃಹತ್ ಮರಗಳು ಧರೆಗೆ ಊರುಳುತ್ತಿವೆ. ಭೂಮಿಯಲ್ಲಿ ತೇವಾಂಶ ಕಡಿಮೆಯಾಗುತ್ತಿದೆ. ಇದರಿಂದಾಗಿ ಈ ಭಾಗದಲ್ಲಿ ಉಷ್ಣತೆ ಹೆಚ್ಚಾಗಿದ್ದು, ಬಿಸಿಲಿನ ತಾಪಕ್ಕೆ ಪರಿ ತಪ್ಪಿಸುತ್ತಿದ್ದಾರೆ. ಲಿಂಗಸ್ಗೂರು ತಾಲೂಕಿನಲ್ಲಿ ನಿತ್ಯ ನೂರಾರು ಟ್ಯಾಕ್ಟರ್ ಹಾಗೂ ಲಾರಿಯಲ್ಲಿ ಅಕ್ರಮ ಮರಳು ಸಾಗಿಸಲಾಗುತ್ತಿದೆ. ಟ್ರಾಕ್ಟರ್ ಮತ್ತು ಲಾರಿಗಳಲ್ಲಿ ಕಾನೂನಿನ ನಿಯಮದ ಪ್ರಕಾರ, ಮರಳು ಸಾಗಿಸುವ ಲಾರಿಗಳು ಮಾರ್ಗದ ಪರವಾನಿಗೆಯನ್ನು ಪಡೆಯಬೇಕು. ಲಾರಿಗಳಿಗೆ ಜಿಪಿಎಸ್ ಅಳವಡಿಸಬೇಕು. ಆದರೆ, ಇಲ್ಲಿ ಯಾರು ಮರಳು ಸಾಗಿಸುವ ಲಾರಿಗಳಿಗೆ ಇವುಗಳ ಪರಿಚಯವೇ ಇರುವದಿಲ್ಲ. ಇದರಿಂದ ಸರ್ಕಾರಕ್ಕೆ ಬರಬೇಕಾದ ರಾಜಧನ ನಷ್ಟವಾಗುತ್ತಿದೆ. ತೆರಿಗೆ ಕಟ್ಟಬೇಕಾದ ಮಧ್ಯವರ್ತಿಗಳು ಸಂಬಂಧಿಸಿದ ಇಲಾಖಾಧಿರಿಗಳೊಂದಿಗೆ ಕೈ ಜೋಡಿಸಿ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ನಷ್ಟವನ್ನುಂಟು ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದಾವೆ. ಲಾರಿಗಳಲ್ಲಿ ನಿಗಧಿತಕಿಂತ ಹೆಚ್ಚು ಮರಳು ತುಂಬಿ ಚಲಾಯಿಸುವುದರಿಂದ
ಗ್ರಾಮೀಣ ರಸ್ತೆಗಳು ಹದಗೆಟ್ಟಿವೆ ಇನ್ನು ಮುಂದಾದರೂ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ ಕಾದ ನೋಡಬೇಕಿದೆ.

ರಜಾದಿನ,ರಾತ್ರಿಯಲ್ಲಿ ಸಾಗಣೆ:ನಂಬರ ಪ್ಲೇಟ ಇಲ್ಲದ ಲಾರಿಗಳು

ಮರಳು ಸಾಗಾಣಿಕೆ ಮಾಡಲು ಅದರದೆ ಆದ ನಿಯಮವಿದೆ ಆದರೆ ಅವೆಲ್ಲ ಗಾಳಿಗೆ ತೂರಿ ರಾತ್ರಿ ಹಗಲು ಎನ್ನದೆ ನಿರಂತರವಾಗಿ ಮರಳು ಸಾಗಾಟ ನಡೆಯುತಿರುತ್ತದೆ ರಜಾದಿನ ಹಾಗೂ ರವಿವಾರ ಹೆಚ್ಚು ಸಾಗಣಿಕೆ ನಡೆಯುತ್ತದೆ ಕೆಲಲಾರಿಗಳಿಗೆ ನಂಬರ ಪ್ಲೇಟಗಳೆ ಇರುವುದಿಲ್ಲ ಆದರು ಯಾರ ಭಯವಿಲ್ಲದೆ ಮರಳು ಸಾಗಾಣಿಕೆ ಮರಮ್ ಸಾಗಾಣಿಕೆ ನಡೆಯುತ್ತದೆ ಎಂದರೆ ಇದರ ಹಿಂದೆ ಎಂತಹ ಬಲಾಡ್ಯ ಕೈಗಳಿರಬಹುದು ಅಥವಾ ಮಾಮೂಲಿನ ಹೊಂದಾಣಿಕೆಯೊ ನೂತನ ವಾಗಿ ಬಂದಿರುವ ಎಸ್ಪಿಯವರು ಇತ್ತ ಗಮನಹರಿಸಬಹುದೆ ಕಾದು ನೋಡೋಣ

WhatsApp Group Join Now
Telegram Group Join Now
Share This Article