ಮಹಾಂತೇಶ ಸುರುಪುರ ನಿವೃತ್ತಿ,ಬೀಳ್ಕೊಡುಗೆ
ಸರ್ವಮಕ್ಕಳು ನಮ್ಮ ಮಕ್ಕಳಂತೆ ಕಂಡು ಸಂತೃಪ್ತಿ ಸೇವೆ ಮಾಡಿದೆ-ಮಹಾಂತೇಶ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ನಾನು ಶಿಕ್ಷಕನಾಗಿ ಸೇವೆ ಸಲ್ಲಿಸಿದ ಎಲ್ಲಾ ಶಾಲೆಗಳಲ್ಲಿ ಸರ್ವನಕ್ಕಳು ನಮ್ಮ ಮಕ್ಕಳೆ ಎಂಬ ಭಾವತಳೆದು ಸಮಭಾವದಿಂದ ಕಂಡು ಪಾಠ ಮಾಡುತ್ತಾ ಸಂತೃಪ್ತ ಸೇವೆ ಸಲ್ಲಿಸಿದೆ ಎಂದು ಮುಖ್ಯಗುರುಗಳ ಹುದ್ದೆಯಿಂದ ನಿವೃತ್ತಿಯಾದ ಮಹಾಂತೇಶ ಸುರುಪುರ ಹೇಳಿದರು
ತಾಲೂಕಿನ ಹುನಕುಂಟಿ ಗ್ರಾಮದ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿಯಾದ ನಿಮಿತ್ಯ ಗ್ರಾಮಸ್ಥರು ಅಭಿಮಾನಿಗಳು ಸೇರಿ ಏರ್ಪಡಿಸಿದ ಭೀಳ್ಕೊಡುಗೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನಗೊಂಡು ಮಾತನಾಡಿದ ಅವರು ನನ್ನ ವೃತ್ತಿ ಜೀವನದಲ್ಲಿ ಎಲ್ಲಾ ಮಕ್ಕಳು ನಮ್ಮ ಮಕ್ಕಳಂತೆ ಕಾಣುವುದು ಹಾಗೂ ಸಮಯಕ್ಕೆ ಸರಿಯಾಗಿ ಶಾಲೆಗೆ ಹಾಜರಾಗುವುದು ಶಿಸ್ತುಬದ್ದ ನಡತೆಯನ್ನು ಕಾಪಾಡಿಕೊಳುವುದು ಇಂತಹ ಮೌಲ್ಯಗಳನ್ನು ಅಳವಡಿಸಿಕೊಂಡು ಎಲ್ಲರೊಡನೇ ಬೆರೆತು ಶಿಕ್ಷಕ ಜೀವನದ ಹಾದಿ ಸವೆಸಿದೆ ಕಲಿಸುವುದರಲಿ ಅಪಾರವಾದ ಸಂತಸವಿದೆ ಅದಕ್ಕಾಗಿ ಸಂತೃಪ್ತಿ ಜೀವನ ನಡೆಸಿದ ಹೆಮ್ಮೆ ನನಗಿದೆ ಎಂದು ನಿವೃತ್ತಿಯಾದ ಮುಖ್ಯಶಿಕ್ಷಕ ಮಹಾಂತೇಶ ಸುರುಪುರ ಹೇಳಿದರು
ಶರಣಗೌಡ ಪಾಟೀಲ್ ಮಾತನಾಡುತ್ತಾ ಮಹಾಂತೇಶ ಶಿಕ್ಷಕರು ಸಮಯ ಪಾಲಕ ಶಿಕ್ಷಕರಾಗಿದ್ದರು ಸಹಶಿಕ್ಷಕರು ಬರುವ ಮುಂಚೆ ತಾವೆ ಬಂದು ಉಸ್ತುವಾರಿವಹಿಸುತ್ತಿದ್ದರು ಇದರಿಂದ ಶಾಲೆಯಲ್ಲಿ ಕಲಿಸುವಿಕೆ ಶಾಲಾ ಸ್ವಚ್ಚತೆ ಮೂಲಭೂತ ಸೌಕರ್ಯಗಳತ್ತ ಗಮನ ಎಲ್ಲವೂ ಉತ್ತಮವಾಗಿದ್ದವು ಅಂತಹ ಶಿಕ್ಷಕರಿಂದಲೆ ಗ್ರಾಮದ ಶಾಲೆ ಉತ್ತಮ ಫಲಿತಾಂಶ ಪಡೆಯುತ್ತಿದೆ ಎಂದರು
ನAತರ ಮಹಾಂತೇಶ ಸುರುಪುರ ಹಾಗೂ ದಂಪತಿಗಳನ್ನು ಶಿಕ್ಷಕರು ಗ್ರಾಮಸ್ಥರು ಅಭಿಮಾನಿಗಳು ಸೇರಿ ಸನ್ಮಾನಿಸಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮದ ವಿಜಯಕುಮಾರ ದೇಸಾಯಿ ವಹಿಸಿದ್ದರು
ಈ ಸಂದರ್ಭದಲ್ಲಿ ಪರಸಪ್ಪ ಹಿಂದುವಾರ, ಜಗದೀಶ ದೋಟಿಹಾಳ, ಕಲ್ಲಪ್ಪ ದೇವರಮನಿ,ಸಂಜೀವಪ್ಪ ಚಲುವಾದಿ, ಶರಣಪ್ಪ ಕಂದಗಲ್, ಭೀಮಣ್ಣ ಕಿಲಾರಟ್ಟಿ, ಬಸವರಾಜ ಕಿಲಾರಹಟ್ಟಿ, ಚಿದಾನಂದ ಗುರುವಿನ್, ಹುಲಗಯ್ಯ ಗುತ್ತೇದಾರ, ಸಂಗನಗೌಡ, ರುದ್ರಗೌಡ, ಪ್ರಭುಲಿಂಗ ಮೇಗಳಮನಿ,ಬಸವರಾಜ ಮ್ಯಾಗೇರಿ, ಕಲ್ಲಪ್ಪ ಕಂದಗಲ್, ನಿಂಗಪ್ಪ ಪರಂಗಿ ಸಹಪಾಟಿಗಳು ಅಭಿಮಾನಿಗಳು ಶಿಕ್ಷಕವೃಂದ ವಿದ್ಯಾರ್ಥಿಗಳು ಸೇರಿದಂತೆ ಇದ್ದರು