ವಿಶ್ವಪರಿಸರ ದಿನಾಚರಣೆ,: ಪ್ಲಾಸ್ಟಿಕ್ ಮುಕ್ತ ಲಿಂಗಸಗೂರು ಅಭಿಯಾನಕ್ಕೆ ಚಾಲನೆ:
ಉತ್ತಮ ಜೀವನಕ್ಕಾಗಿ ಪರಿಸರ ಉಳಿಸಿ ಬೆಳಸಿ-ನ್ಯಾಯಾಧೀಶೆ ಉಂಡಿ ಮಂಜುಳಾ ಶಿವಪ್ಪ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಉತ್ತಮ ಜೀವನಕ್ಕಾಗಿ ಪರಿಸರ ಉಳಿಸಿ ಬೆಳೆಸಬೇಕಾಗಿದೆ ಪ್ಲಾಸ್ಟಿಕ್ ಮುಕ್ತ ಪರಿಸರ ಕಾಪಾಡಿಕೊಂಡು ಸ್ವಚ್ಚ ಪರಿಸರ ಕಾಪಾಡಬೇಕೆಂದು ನ್ಯಾಯಾಧೀಶೆ ಉಂಡಿ ಮಂಜುಳಾ ಶಿವಪ್ಪ ಹೇಳಿದರು
ಅವರು ಪಟ್ಟಣದ ಹೊಸನ್ಯಾಯಾಲಯದ ಆವರಣ ಹಾಗೂ ಆದರ್ಶ ಮಹಾವಿದ್ಯಾಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ,ತಾಲೂಕಾ ನ್ಯಾಯವಾದಿಗಳ ಸಂಘ,ತಾಲೂಕಾ ಆಡಳಿತ, ಅರಣ್ಯ ಇಲಾಖೆ, ತೋಟಗಾರಿಕೆ, ಶಿಕ್ಷಣ,ಪೊಲೀಸ್ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪ್ಲಾಸ್ಟಿಕ್ ಮುಕ್ತ ಲಿಂಗಸಗೂರು ಅಭಿಯಾನ ಕಾಐðಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಪರಿಸರವನ್ನು ಉಳಿಸಿ ಉತ್ತಮ ಜೀವನಕ್ಕೆ ದಾರಿಯಾಗುತ್ತದೆ ಎಂದರು
ಈ ಸಂದರ್ಭದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶ ಅಂಬಣ್ಣ ಕೆ, ಸಹಾಯಕ ಸರಕಾರಿ ಅಭಿಯೋಜಕ ವಿರುಪಣ್ಣ ಧುಮತಿ, ತಾಲುಕಾ ವಕೀಲರ ಸಂಘದ ತಾಲೂಕಾಧ್ಯಕ್ಷ ಭೂಪನಗೌಡ ಪಾಟೀಲ್, ಅರಣ್ಯ ಅಧಿಕಾರಿ ವಿದ್ಯಾಶ್ರೀ ಶ್ರೀಶೈಲ ವಾಗ್ಮೋರೆ,ಭೀಮಣ್ಣ, ರತ್ನಮ್ಮ,ಬಸವರಾಜ ಗುಡಿಹಾಳ, ಮೌಣೇಶ,ದೊಡ್ಡನಗೌಡ ಪಾಟೀಲ್,ವೆಂಕೋಬ ಗುಡದನಾಳ,ನ್ಯಾಯಾಲಯದ ಸಿಬ್ಬಂದಿಗಳು ವಕೀಲರು ವಿದ್ಯಾರ್ಥಿಗಳು ಸೇರಿದಂತೆ ಇದ್ದರು