೨೦೦ಹಾಸಿಗೆ ಆಸ್ಪತ್ರೆ ವರ್ಗಾವಣೆ ಧ್ವನಿ ಎತ್ತದ ಮಾಜಿ ಶಾಸಕರು,ಹುಟ್ಟುಹಬ್ಬ ಆಚರಣೆ ಯಾವನ್ಯಾಯ? ಜಾಲತಾಣದಲ್ಲಿ ಚರ್ಚೆ ವೈರಲ್!!
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ತಾಲೂಕಿಗೆ ಮಂಜೂರಿಯಾಗಿದ್ದ ೨೦೦ಹಾಸಿಗೆಯ ಆಸ್ಪತ್ರೆ ಸಿಂಧನೂರು ತಆಲೂಕಿಗೆ ವರ್ಗಾವಣೆಯಾದರು ಧ್ವನಿ ಎತ್ತದ ಮಾಜಿ ಶಾಸಕರಾದ ಡಿ ಎಸ್ ಹೂಲಿಗೇರಿಯವರು ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದು ಯಾವನ್ಯಾಯವೆಂದು ವಾಟ್ಸಪ್ ಫೇಸ್ ಬುಕ್ ವಿವಿಧ ಜಾಲತಾಣದಲ್ಲಿ ಚರ್ಚೆ ಆರೋಪ ಪ್ರತ್ಯಾರೋಪಗಳು ನಡೆದಿದದು ಕೆಲವರು ಸಮಾಧಾನಿಸುವ ಕೆಲಸ ಮಾಡುವುದು ಭಾರಿ ವೈರಲ್ ಆಗುತ್ತಿದೆ
ಜೂ೧೨ರಂದು ಮಾಜಿಶಾಸಕರಾದ ಡಿ ಎಸ್ ಹೂಲಿಗೇರಿಯವರ ಹುಟ್ಟುಹಬ್ಬವಿದ್ದು ಪಟ್ಟಣದ ತುಂಬ ಬ್ಯಾನರ್ ಬಟಿಂಗ್ಸ್ ಗಳು ರಆರಾಜಿಸುತ್ತಿವೆ ಆದರೆ ಇತ್ತ ವಾಟ್ಸಪ್ ನಂತಹ ಜಾಲತಾಣದಲ್ಲಿ ಪರವಿರೋಧ ಚರ್ಚೆಗಳು ಭಾರಿ ವೈರಲ್ ಆಗುತ್ತಿವೆ
ನಾನು ಯಾವ ಬಣವು ಅಲ್ಲ ಆದರೆ ಕಾಂಗ್ರೆಸ್ ಪಕ್ಷದ ಬಣ ಎನ್ನುವ ಒಬ್ಬರು ಹೀಗೆ ಹೇಳುತ್ತಾರೆ ಜನನಾಯಕರಾಗಿದ್ದರೆ ೨೦೦ ಬೆಡ್ಡಿನ ಆಸ್ಪತ್ರೆ ಲಿಂಗಸಗೂರಿಗೆ ಮಂಜೂರಿಯಾಗುವವರೆಗೆ ನೀವು ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲವೆಂದು ಶಪಥ ಮಾಡಿಕೊಳ್ಳಬೇಕು ಇಲ್ಲವಾದರೆ ಇದು ನಿಮ್ಮ ಸ್ವಾರ್ಥ ರಾಜಕಾರಣವೆಂದು ಜನರಿಗೆ ಸಂದೇಶಹೋಗುತ್ತದೆ ಎನ್ನುತ್ತಾರೆ ಮತ್ತೊಬ್ಬರು ಸಮಾಧಾನಿಸುತ್ತಾ ಇದನ್ನು ಚರ್ಚೆ ಮಾಡುವ ಬದಲು ಡಿಎಸ್ ಹೂಲಿಗೇರಿ ಅಥವ ಪಕ್ಷದ ಅಧ್ಯಕ್ಷರ ಗಮನಕ್ಕೆ ತರಬೇಕಾಗಿತ್ತು ಎಂದು ಸಮಾಧಾನಿಸುತ್ತಾರೆ
ನಾವು ಕೇವಲ ಚುನಾವಣೆಯಲ್ಲಿ ಮಾತ್ರ ಮಾಜಿ ಶಾಸಕರಿಗೆ ನೆನಪಾಗುತ್ತೇವೆ ನಮ್ಮ ಗ್ರಾಮದತ್ತ ಅವರ ಗಮನವೇ ಇಲ್ಲವೆಂದು ದೂರುತ್ತಾರೆ ಇವಾಗ ನಾವು ಏನು ಅಂದರು ನಮ್ಮ ಮಾತಿಗೆ ಬೆಲೆ ಇಲ್ಲ ಸಂದರ್ಭ ಬಂದಾಗ ಉತ್ತರಿಸೋಣವೆನ್ನುವುದು ಮತ್ತೊಬ್ಬರ ಮಾತು
ಹೀಗೆ ಜಾಲತಾಣದಲ್ಲಿ ಭಾರಿ ಚರ್ಚೆಯಾಗುತ್ತಿದ್ದು ಇದಕ್ಕೆ ಮಾಜಿ ಶಾಸಕರಾದ ಡಿಎಸ್ ಹೂಲಿಗೇರಿಯವರು ಯಾವ ನಿರ್ಧಾರ ತೆಗೆದುಕೊರ್ಳಳುತ್ತಾರೋ ಕಾದು ನೋಡಬೇಕು ಅಷ್ಟೆ..?