ತೊರಲಬೆಂಚಿಗೆ ಮಂಜೂರಿಯಾದ ವಿದ್ಯುತ್ ಉಪಕೇಂದ್ರ, ಆರ್ ಬಿ ತಿಮ್ಮಾಪುರ ಸುಣಕಲ್ಲಿಗೆ ಎತ್ತಂಗಡಿಗೆ ಯತ್ನ!!
ಕಲ್ಯಾಣ ಕರ್ನಾಟಕ ವಾರ್ತೆ
(ಲಕ್ಷ್ಮಣ ಬಾರಿಕೇರ್)
ಲಿಂಗಸಗೂರು:ತಾಲೂಕಿನ ಆನೆಹೊಸೂರು ಭಾಗದಲ್ಲಿ ವಿದ್ಯುತ್ ಉಪಕೇಂದ್ರವನ್ನು ಸರಕಾರ ಮಂಜೂರಿ ಮಾಡಿ ಆದೇಶ ಹೊರಡಿಸಿದ್ದು ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಅದನ್ನು ಸುಣಕಲ್ ಗ್ರಾಮಕ್ಕೆ ಸ್ಥಳಾಂತರ ಮಾಡಲು ಇಂಧನ ಸಚಿವರಿಗೆ ಪತ್ರ ಬರೆದು ಒತ್ತಾಯ ಮಾಡಿರುವ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ
ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಆನೆಹೊಸೂರು ಗ್ರಾಮಕ್ಕೆ ಈ ಹಿಂದೆ ೧೧೦/೧೧ ಕೆ,ವಿ ವಿದ್ಯುತ್ ಉಪಕೇಂದ್ರ ಮಂಜೂರಿಯಾಗಿತ್ತು ಅದನ್ನು ಸ್ಥಾಪಿಸಲು ಗ್ರಾಮದ ಪಕ್ಕದಲ್ಲಿ ಸ್ಥಳವನ್ನು ಗುರುತಿಸಲಾಗಿತ್ತು ಆದರೆ ಸರಕಾರ ಮರು ಆದೇಶ ಹೊರಡಿಸಿ ಸದರಿ ಉಪಕೇಂದ್ರವನ್ನು ಆನೆಹೊಸೂರು ಪಕ್ಕದ ತೊರಲಬೆಂಚಿ ಗ್ರಾಮಕ್ಕೆ ಸ್ಥಳಾಂತರ ಮಾಡಲು ಸೂಚಿಸಿತ್ತು ಆದರೆ ಗ್ರಾಮಸ್ಥರ ಒತ್ತಾಯದ ಮೇರೆಗೆ ಪುನಃ ಆನೆಹೊಸೂರು ಗ್ರಾಮಕ್ಕೆ ಎಂದು ಹೇಳಲಾಗಿತ್ತಾದರು ಅದನ್ನು ತೊರಲಬೆಂಚಿಯಲ್ಲೆ ಸ್ಥಾಪನೆ ಮಾಡಬೇಕು ಎಂದು ಸರಕಾರದ ಆದೇಶವಾಯಿತು ಅದರಂತೆ ತೊರಲಬೆಂಚಿ ಗ್ರಾಮದಲ್ಲಿ ಸ್ಥಾಪನೆ ಮಾಡಲು ಸ್ಥಳಾವಕಾಶ ಇದೆಯಾ ಅಲ್ಲಿಯ ಅನುಕೂಲ ಅನಾನುಕೂಲಗಳೇನು ಎಂಬುದನ್ನು ಜೆಸ್ಕಾಂ ಗೆ ಬರೆಯಲು ಇತ್ತೀಚೆಗೆ ಇಲಾಖೆ ಆದೇಶವನ್ನು ಮಾಡಿದೆ ಇಷ್ಟರಲ್ಲಿಯೆ ಜೆಸ್ಕಾಂ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ವಿಸ್ತçತವಾದ ವರದಿಯನ್ನು ನೀಡುವ ಹಂತದಲ್ಲಿದ್ದರು ಆದರೆ ವಿಷಯ ತಿಳಿದ ಅಬಕಾರಿ ಸಚಿವರಾದ ಆರ್ ಬಿ ತಿಮ್ಮಾಪುರ ಸದರಿ ಉಪಕೇಂದ್ರವನ್ನು ಸುಣಕಲ್ ಗ್ರಾಮಕ್ಕೆ ಸ್ಥಳಾಂತರ ಮಾಡಲು ಇಂಧನ ಸಚಿವರಿಗೆ ಪತ್ರಬರೆದಿರುವುದು ಬಹಿರಂಗವಾಗಿದೆ
ತಾಲೂಕಿನ ಸುಣಕಲ್ ಗ್ರಾಮದ ಹತ್ತಿರ ಅಬಕಾರಿ ಸಚಿವರ ಒಡೆತನಕ್ಕೆ ಸೇರಿದ ಶುಗರ್ ಫ್ಯಾಕ್ಟರಿ ತಲೆ ಎತ್ತಿರುವುದರಿಂದ ವಿದ್ಯುತ್ ಉಪಕೇಂದ್ರ ಅಲ್ಲಿಗೆ ಮಂಜೂರಿಯಾದರೆ ತಮಗೆ ಹೆಚ್ಚಿನ ಅನುಕೂಲವಾಗಲಿದೆ ಎನ್ನುವ ದೃಷ್ಠಿಯಿಂದ ಸದರಿ ಉಪಕೇಂದ್ರವನ್ನು ಸುಣಕಲ್ ಗ್ರಾಮಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ ಎನ್ನುವ ಆರೋಪಗಳು ಕೇಳಿಬರುತ್ತಿವೆ
ಆನೆಹೊಸೂರು ಗ್ರಾಮದಲ್ಲಿ ಮಾಡುವುದರಿಂದ ಉಪಯೋಗವೇನು?:ತಾಲೂಕಿನ ಆನೆಹೊಸೂರು ಅಥವ ತೊರಲಬೆಂಚಿಯಲ್ಲಿ ವಿದ್ಯುತ್ ಉಪಕೇಂದ್ರವನ್ನು ಮಾಡುವುದರಿಂದ ಈ ಭಾಗದಲ್ಲಿ ರೈತರಿಗೆ ಹೆಚ್ಚು ಅನುಕೂಲವಾಗಲಿದೆ ಹೆಚ್ಚಿನ ಸಂಖ್ಯೆಯಲ್ಲಿ ನೀರೆತ್ತುವ ಮೋಟರ್ ಪಂಪಗಳು ಇರುವುದರಿಂದ ರೈತರಿಗೆ ಅಡೆತಡೆ ಇಲ್ಲದೆ ವಿದ್ಯುತ್ ದೊರೆಯಲಿದೆ ಆದರೆ ಸುಣಕಲ್ಲಿಗೆ ಸ್ಥಳಾಂತರ ಮಾಡಿದರೆ ಈಗಾಗಲೆ ರೈತರು ವಿದ್ಯುತ್ ಸಮಸ್ಯೆಯನ್ನು ಅನುಭವಿಸುತ್ತಿದ್ದು ಯಥಾಸ್ಥಿತಿ ಮುಂದುವರೆಯಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ
ಹೇಳಿಕೆ:ಆನೆಹೊಸೂರು ಭಾಗದಲ್ಲಿ ವಿದ್ಯುತ್ ಉಪಕೇಂದ್ರ ನೀಡಿದರೆ ಇಲ್ಲಿ ರಾಂಪೂರ ಏತನೀರಾವರಿಯ ಜಾಕವೆಲ್ ಇದ್ದು ನಿರಂತರ ವಿದ್ಯುತ್ ದೊರೆಯುತ್ತದೆ ಯಾವುದೆ ಅಡೆತಡೆಯಾಗುವುದಿಲ್ಲ,ಸುತ್ತಮುತ್ತಲ ರೈತರಿಗೆ ೩ಫೇಸ್ ವಿದ್ಯುತ್ ನಿರಂತರವಾಗಿ ದೊರೆಯುತ್ತದೆ ಸ್ಥಳಾಂತರವಾದರೆ ರೈತರು ಗರಾಹಕರು ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ ಅದಕ್ಕಾಗಿ ಈಗಾಗಲೆ ಮಂಜೂರಿಯಾದAತೆ ಆನೆಹೊಸೂರು ಭಾಗದಲ್ಲಿಯೆ ವಿದ್ಯುತ್ ಉಪಕೇಂದ್ರ ನೀಡಲಿ-ಬಂದೇನವಾಜ್ ಕೊಳೂರು ಕೆಡಿಪಿ ಮಾಜಿ ಸದಸ್ಯರು ಆನೆಹೊಸೂರು