ಸರ್ಜಾಪೂರ:ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ ತಡೆಗೆ ಬಿಜೆಪಿ ಪ್ರತಿಭಟನೆ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಸರಕಾರದಿಂದ ಬಡವರಿಗೆ ಬರಬೇಕಾದ ವಸತಿ ಯೋಜನೆಯ ಮನೆಗಳ ಹಂಚಿಕೆಯಲ್ಲಿ ಗ್ರಾಮಪಂಚಾಯ್ತಿ ಮಟ್ಟದಲ್ಲಿ ಭಾರಿ ಭ್ರಷ್ಟಾಚಾರ ನಡೆದಿದ್ದು ಅದನ್ನು ತಡೆಯಬೇಕು ಎಂದು ಒತ್ತಾಯಿಸಿ ಮಾಜಿ ಶಾಸಕರ ಪುತ್ರರಾದ ಪ್ರಸನ್ ಪಾಟೀಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು
ರಾಜ್ಯದ ವಸತಿ ಇಲಾಖೆಯಲ್ಲಿ ಗ್ರಾಮಪಂಚಾಯಿತಿಗಳಿಗೆ ಮನೆಗಳನ್ನು ವಿತರಿಸುವಾಗ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಆಳಂದ ಶಾಸಕರಾದ ಬಿ ಆರ್ ಪಾಟೀಲ್ ಇಲಾಖೆಯ ಅಧಿಕಾರಿಯೊಂದಿಗೆ ಮಾತನಾಡಿದ ಆಡಿಯೋ ವೈರಲ್ ಆಗಿದ್ದು ಅದರಂತೆ ರಾಜ್ಯದಲ್ಲಿ ಶಾಸಕರುಗಳು ಮನೆಗಳು ನೀಡುವಂತೆ ಮನವಿ ಸಲ್ಲಿಸಿದರೆ ಮನೆಗಳು ನೀಡುತ್ತಿಲ್ಲ ಆದರೆ ಗ್ರಾಮಪಂಚಾಯಿತಿಯವರು ಮನೆಗೆ ಇಂತಿಷ್ಟು ಎಂದು ಹಣನೀಡಿ ಇಲಾಖೆಯಿಂದ ಹೆಚ್ಚಿನ ಮನೆಗಳನ್ನು ತರುತ್ತಿದ್ದಾರೆ ಲಂಚನೀಡಿದರೆ ಮನೆ ಎನ್ನುವಂತಾಗಿದ್ದು ಇದಕ್ಕೆ ಸಂಬಂಧಿಸಿದ ಸಚಿವರನ್ನು ವಜಾಗೊಳಿಸಬೇಕು ಮತ್ತು ಭಾಗಿಯಾದ ಅಧಿಕಾರಿಗಳ ಮೇಲೆ ಕೂಡಲೇ ಕ್ರಮವಹಿಸಬೇಕು ಎಂದು ಬರೆದ ಮನವಿಯನ್ನು ಸರ್ಜಾಪೂರ ಗ್ರಾಮಪಂಚಾಯಿತಿಗೆ ಸಲ್ಲಿಸಿ ಕ್ರಮ್ಕಕೆ ಆಗ್ರಹಿಸಿ ಗ್ರಾಮಪಂಚಾಯಿತಿ ಮಟ್ಟದ ಪ್ರತಿಭಟನೆಗೆ ಚಾಲನೆ ನೀಡಿದರು
ಈ ಸಂದರ್ಭದಲ್ಲಿ ಬಸವಂತ್ರಾಯ ಕುರಿ, ವಿಕ್ರಂ ಪಾಟೀಲ್, ಶಂಕರಗೌಡ ಪಾಟೀಲ್, ರಾಮಣ್ಣ ಬಂಡಾರಿ,ದೇವಪ್ಪ ಕಾವಲಿ, ಬಸವರಾಜ ಕಾಳಾಪುರ,ದೇವಪುತ್ರ ಹೊನ್ನಳ್ಳಿ,ಎಲ್ಲಪ್ಪ ಬೋವಿ,ಮಲ್ಲಪ್ಪ ಬಿಳುವಾರ, ಸರ್ಜಾಪೂರ,ಕುಪ್ಪೇಗುಡ್ಡ,ಅಮರಾವತಿ ಗ್ರಾಮಗಳ ಬಿಜೆಪಿ ಮುಖಂಡರು ಸೇರಿದಂತೆ ಇದ್ದರು