ಬಯ್ಯಾಪುರ ಬಣ ಭೇಟಿ: ಲಿಂಗಸುಗೂರನಿಂದ ಸ್ಥಳಾಂತರಗೊಂಡಜಿಲ್ಲಾಸ್ಪತ್ರೆಯನ್ನು ಮರಳಿ ನೀಡಲು ಸಿ.ಎಂ ಭರವಸೆ
ಕಲ್ಯಾಣ ಕರ್ನಾಟಕ ವಾರ್ತೆ
ಜೂನ್ 27:
ಲಿಂಗಸಗೂರು:ಪಟ್ಟಣಕ್ಕೆ ಮಂಜೂರಿಯಾಗಿದ್ದ ೨೦೦ ಹಾಸಿಗೆಯ ಜಿಲ್ಲಾಸ್ಪತ್ರೆ ರಾಜಕೀಯ ಒತ್ತಡದಿಂದ ಬೇರೆ ತಾಲೂಕಿಗೆ ಸ್ಥಳಾಂತರಗೊಂಡಿದ್ದನ್ನು ಬಯ್ಯಾಪುರ ಬಣದ ನಿಯೋಗ ಸಿಎಂ ರವರನ್ನು ಭೇಟಿಯಾಗಿ ಸಮಸ್ಯೆಯನ್ನು ವಿವರಿಸಿದಾಗ ಸದರಿ ವಿಷಯ ನನ್ನ ಗಮನಕ್ಕೆ ಇಲ್ಲ ಬೇಗನೆ ಸದರಿ ಆಸ್ಪತ್ರೆಯನ್ನು ಲಿಂಗಸಗೂರಿಗೆ ನೀಡಲು ಸೂಚಿಸುವುದಾಗಿ ಭರವಸೆ ನೀಡಿದ್ದಾರೆಂದು ತಿಳಿದುಬಂದಿದೆ
ಸ್ಥಳೀಯ ಸರಕಾರಿ ಆಸ್ಪತ್ರೆಯನ್ನು ಜಿಲ್ಲಾಸ್ಪತ್ರೆಯನ್ನಾಗಿ ಮೇಲ್ದರ್ಜೆಗೆರಿಸಲು ೨೦೨೪ರ ಸೆಪ್ಟಂಬರನಲ್ಲಿ ಕಲಬುರ್ಗಿಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರವನ್ನು ಸಿಂಧನೂರಿನ ಶಾಸಕರ ಒತ್ತಡಕ್ಕೆ ಮಣಿದು ಸರಕಾರ ರದ್ದುಗೊಳಿಸಿ ಸಿಂಧನೂರಿಗೆ ಎತ್ತಗಂಡಿ ಮಾಡಲಾಗಿತ್ತು. ನಿರ್ಧಾರ ಖಂಡಿಸಿ ನಾಗರೀಕರು ಜನಪರ ಹೋರಾಟಗಾರರು ಸರ್ಕಾರದ ಕ್ರಮ ಖಂಡಿಸಿ ಕಳೆದ ತಿಂಗಳು ಬೀದಿಗಿಳಿದ ಹೋರಾಟ ನಡೆಸಿದ್ದರು.
ಲಿಂಗಸಗೂರು ಐತಿಹಾಸಿಕವಾಗಿ ಬೌಗೋಳಿಕವಾಗಿ ಸಾಮಾಜಿಕ ಶೈಕ್ಷಣಿಕ ಅಭಿವೃದ್ದಿ ಹೊಂದಿದ ಪ್ರದೇಶವಾಗಿದೆ, ಈ ಹಿಂದೆ ಆಂಗ್ಲರ ಕಾಲದಲ್ಲಿ ಜಿಲ್ಲಾ ಕೇಂದ್ರವಾಗಿತ್ತು. ಮತ್ತು ಲಿಂಗಸಗೂರು ತಾಲೂಕು ಆಸ್ಪತ್ರೆಗೆ ನಿತ್ಯ ಸುತ್ತಮುತ್ತಲ ತಾಲೂಕುಗಳಿಂದ ಸಾವಿರಾರು ಬಡ ಜನತೆ ಆಸ್ಪತ್ರೆಗೆ ಬರುತ್ತಾರೆ. ಈಗಾಗಲೇ ಜಾಗ ಕೂಡಾ ಗುರುತಿಸಿ ಜಿಲ್ಲಾಧಿಕಾರಿಗಳಿಗೆ ನೀಡಿದ್ದರು ಜಿಲ್ಲಾ ಆಸ್ಪತ್ರೆ ರದ್ದಾಗಿ ಸ್ಥಳಾಂತರವಾಗಿತ್ತು. ಮಾಜಿ ಶಾಸಕ ಡಿಎಸ್ ಹೂಲಗೇರಿ ಕೆಲ ಕಾಂಗ್ರೇಸ್ ನಾಯಕರು ಹಾಲಿ ಶಾಸಕರ ಇಚ್ಚಾಶಕ್ತಿ ಕೊರತೆ ಎಂದು ದೂರಿದ್ದರು. ಆಸ್ಪತ್ರೆ ಬೇಕೇಂಬ ಜನಪರ ಹೋರಾಟದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಹಾಲಿ ಶಾಸಕ ಮಾನಪ್ಪ ವಜ್ಜಲ್ ೨೦೧೩ರಲ್ಲಿ ನಾನು ಸಲ್ಲಿಸಿದ ಮನವಿಯಿಂದ ಮಂಜೂರಿಯಾದ ಆಸ್ಪತ್ರೆ ಸರಕಾರ ಬಿಜೆಪಿ ಶಾಸಕರಿದ್ದಾರೆಂದು ಎತ್ತಂಗಡಿ ಮಾಡಲಾಗಿದೆ ಸಿಎಂ, ಬಳಿ ನಿಯೋಗ ತೆರಳಿ ಪುನ: ಜಿಲ್ಲಾಸ್ಪತ್ರೆ ತರುವುದಾಗಿ ಹೇಳಿದ್ದರು.
ಇರ್ವರಿರ್ವರ ಆರೋಪ ಪ್ರತ್ಯಾರೋಪಗಳ ಮಧ್ಯ ಮಾಜಿ ಸಚಿವ ಅಮರೇಗೌಡ ಬಯ್ಯಾಪೂರ ಹಾಗೂ ವಿಧಾನ ಪರಿಷತ ಸದಸ್ಯ ಶರಣಗೌಡ ಬಯ್ಯಾಪೂರ ಇರ್ವರು ಲಿಂಗಸುಗೂರು ಮುದಗಲ್ ಕಾರ್ಯಕರ್ತರ ನಿಯೋಗದ ಜತೆ ಬೆಂಗಳೂರಲ್ಲಿ ಗುರುವಾರ ಸಂಜೆ ೭ ಗಂಟೆಗೆ ಮುಖ್ಯಮಂತ್ರಿ ಸಿದ್ದಾರಾಮಯ್ಯ ಅವರನ್ನು ಭೇಟಿ ಮಾಡಿ ಲಿಂಗಸಗೂರು ಎಸ್.ಸಿ ಮೀಸಲು ವಿಧಾನಸಭಾ ಕ್ಷೇತ್ರವಾಗಿದ್ದು ಬಡ ಜನತೆ ಹೆಚ್ಚಾಗಿದ್ದಾರೆ. ನಿತ್ಯ ೫೦೦ ಜನ ಹೊರ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಆಸ್ಪತ್ರೆ ಅಗತ್ಯತೆಯ ವಸ್ತು ಸ್ಥೀತಿ ತಿಳಿಸಿ ಲಿಂಗಸಗೂರಿಗೆ ೨೦೦ ಹಾಸಿಗೆ ಜಿಲ್ಲಾಸ್ಪತ್ರೆ ಅವಶ್ಯಕತೆಯ ಮಾಹಿತಿ ನೀಡಿ ಪುನ: ಮಂಜೂರಿ ಮಾಡುವಂತೆ ಮಾಡಿದ ಮನವಿಗೆ ಸ್ಪಂದಿಸಿದ ಸಿ.ಎಂ, ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ.
ಸಿ.ಎಂ ಭರವಸೆ : ಲಿಂಗಸುಗೂರ ಸರಕಾರಿ ಸಾರ್ವಜನಿಕ ಆಸ್ಪತ್ರೆ ೨೦೦ ಹಾಸಿಗೆಯ ಜಿಲ್ಲಾ ಮಟ್ಟದ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಯ್ಯಾಪೂರು ನಿಯೋಗ ಮನವಿ ಸಲ್ಲಿಸಿದಾಗ ಒಪ್ಪಿಗೆಯ ಭರವಸೆ ನೀಡಿ ಎರಡು ದಿನದಲ್ಲಿ ಆರೋಗ್ಯ ಇಲಾಖೆಯ ಕಾರ್ಯದರ್ಶಿಗಳ ಜತೆ ಚರ್ಚಿಸಿ ಜಿಲ್ಲಾಸ್ಪತ್ರೆ ಮಂಜೂರಾತಿ ಭರವಸೆಯನ್ನು ನಿಯೋಗಕ್ಕೆ ನೀಡಿದ್ದಾರೆ.
ಈ ವೇಳೆ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭೂಪನಗೌಡ ಕರಡಕಲ್, ಬಸವರಾಜಗೌಡ ಗಣೆಕಲ್, ಡಿ.ಜಿ ಗುರಿಕಾರ, ಗುಂಡಪ್ಪ ನಾಯಕ, ಸೋಮಶೇಖರ ಐದನಾಳ, ಲಾಲಪ್ಪ ರಾಠೋಡ, ಏಕಅಮರಣ್ಬ, ಲಿಂಗಣ್ಣಗೌಡ, ಮಾಲಿಂಗರಾಯ ಮಾಚನೂರು, ಈರಪ್ಪ ಗೌಡೂರು, ಇಬ್ರಾಹಿಂ ಗ್ಯಾರಂಟಿ, ಚನ್ನಾರೆಡ್ಡಿ ಬಿರಾದರ, ಅನಿಲ ಭೂಶೆಟ್ಟಿ, ಶರಣಪ್ಪ ದೇಸಾಯಿ, ರಾಘವೇಂದ್ರ ದೇಶಪಾಂಡೆ, ಸಾದಿಕ ಇತರರಿದ್ದರು.