ನಟ ವಿನೋದ್ ಪ್ರಭಾಕರ್ ಪಟ್ಟಣಕ್ಕೆ ಭೇಟಿ ನೋಡಲು ಮುಗಿಬಿದ್ದ ಅಭಿಮಾನಿಗಳು
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸುಗೂರು : ಚಿತ್ರ ನಟ ವಿನೋದ್ ಪ್ರಭಾಕರ್ ಪಟ್ಟಣಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಭಿಮಾನಿಗಳು ಅವರನ್ನು ನೋಡಲು ಮುಗಿಬಿದ್ದಿದ್ದರು.
ಕಾರಿನ ಸನ್ ರೂಫ್ ಮೂಲಕ ಹೊರಗಡೆ ಬಂದ ನೆಚ್ಚಿನ ನಟನನ್ನು ಮುಟ್ಟಲು ಮಾತಾಡಲು ಜನ ಗುಂಪಾಗಿ ಮುಗಿಬಿದ್ದರು. ಅಭಿಮಾನಿಗಳನ್ನು ಕಂಡು ನಮಿಸಿದ ನಟ ವಿನೋದ್ ಪ್ರಭಾಕರ್ ಮಾರುತಿ ಯೂನಿಯನ್ ಫಿಟ್ ನೆಸ್ ಜಿಮ್ ಗೆ ತೆರಳಿ ಕಸರತ್ತು ಮಾಡಿದರು. ಉತ್ತರ ಕರ್ನಾಟಕದ ಅಭಿಮಾನಿಗಳ ಅಭಿಮಾನ ಹಾಗೂ ಅವರ ಪ್ರೀತಿ ಸದಾ ಹೀಗೆಯೇ ಇರಲಿ ಎಂದು ಕೋರಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮೋಹನ್ ಗೋಸ್ಲೆ, ಅನೀಲ್ ಕುಮಾರ್, ರಮೇಶ ಗೋಸ್ಲೆ, ಅಂಬರೇಶ ನಾಯಕ್, ದುರುಗಪ್ಪ ನಾಯಕ್ ಹೊನ್ನಳಿ, ಅಂಬರೇಶ ವೆಂಕಟಾಪುರ, ಮೌನೇಶ್ ಐದನಾಳ, ಹನುಮೇಶ ಆಕಾಶ ಡಿಜಿಟಲ್, ಅಂಬರೇಶ ಆನೆಹೊಸೂರ, ಹನುಮಂತ ಬಡಿಗೇರ ಸೇರಿದಂತೆ ಇದ್ದರು.