23ರಂದು ಜಿಲ್ಲೆಗೆ ಮುಖ್ಯಮಂತ್ರಿ ಆಗಮನ,ಲಿಂಗಸಗೂರಿಗೆ200 ಬೆಡ್ ಆಸ್ಪತ್ರೆಯ ಅಹವಾಲು ಸಲ್ಲಿಕೆಯಾದೀತೆ?
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಜೂ೨೩ರಂದು ವಿವಿಧ ಕಾಮಗಾರಿಗಳ ಉದ್ಘಾಟನೆಗೆ ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದು ಅಂದು ತಾಲೂಕಿನಿಂದ ಕೈತಪ್ಪಿಹೋಗಿರುವ 200 ಹಾಸಿಗೆಯ ಜಿಲ್ಲಾಸ್ಪತ್ರೆಯನ್ನು ಪುನಃ ನೀಡುವಂತೆ ವಿವಿಧ ಸಂಘಟನೆ ಜನಪರ ಹೋರಾಟಗಾರರು ಹಾಗೂ ಜನಪ್ರತಿನಿಧಿಗಳು ಸೇರಿದಂತೆ ಆಹವಾಲು ಸಲ್ಲಿಸಿ ಮುಖ್ಯಮಂತ್ರಿಗಳಿಗೆ ಒತ್ತಡ ಹಾಕಬಹುದೇ?
ಲಿಂಗಸಗೂರಿಗೆ ಬೇರೆ ಜಿಲ್ಲೆ ತಾಲೂಕುಗಳಿಂದ ಸಾಕಷ್ಟು ಪ್ರಮಾಣದಲ್ಲಿ ಚಿಕಿತ್ಸೆ ಪಡೆಯಲು ರೋಗಿಗಳು ಆಗಮಿಸುತ್ತಿದ್ದು ಹೆಚ್ಚಿನ ಒತ್ತಡ ಇರುವುದನ್ನು ಗಮನಿಸಿ ಈ ಹಿಂದೆ ಸರಕಾರದ ಮಟ್ಟದಲ್ಲಿ ಚರ್ಚಿತವಾಗಿ ೨೦೦ ಹಾಸಿಗೆಯ ಜಿಲ್ಲಾಸ್ಪತ್ರೆಯನ್ನು ಲಿಂಗಸಗೂರಿಗೆ ಮಂಜೂರಿ ಮಾಡಲಾಗಿತ್ತು ಆದರೆ ರಾಜಕೀಯ ಒತ್ತಡಗಳಿಂದ ಸದರಿ ಆಸ್ಪತ್ರೆಯನ್ನು ಸಿಂಧನೂರಿಗೆ ಸ್ಥಳಾಂತರ ಮಾಡಿರುವುದರಿಂದ ಇಲ್ಲಿಯ ಕೆಲಸಂಘಟನೆಗಳು ಹಾಗೂ ಸಂಘಟನೆಗಳ ಒಕ್ಕುಟಗಳು ಸೇರಿ ಹೋರಾಟಗಳನ್ನು ರೂಪಿಸಿ ಮನವಿ ಸಲ್ಲಿಸಿದರು ಶಾಸಕರ ನೇತೃತ್ವದಲ್ಲಿ ಲಿಂಗಸಗೂರು ಬಂದ್ ಮಾಡಿ ಮನವಿಯನ್ನು ಸಲ್ಲಿಸಲಾಯಿತು ಆದರೆ ಇದುವರೆಗೂ ಸರಕಾರದಲ್ಲಿ ಈ ಬಗೆಗೆ ಯಾವುದೆ ಬಗೆಯ ಆಶ್ವಾಸನೆ ಚರ್ಚೆಗಳು ಮಾತ್ರ ನಡೆದಿರುವುದಉ ದುರಂತವೇ ಸರಿ
ಶಾಸಕ ಮಾನಪ್ಪ ವಜ್ಜಲರು ರಾಜಕೀಯ ಕುತಂತ್ರದಿAದ ಜಿಲ್ಲಾಸ್ಪತ್ರೆಯು ಕೈತಪ್ಪಿದ್ದು ತಾಲೂಕಿನಿಂದ ನಿಯೋಗವನ್ನು ತೆಗೆದುಕೊಂಡು ಹೋಗಿ ಮುಖ್ಯಮಂತ್ರಿಗಳನ್ನು ಭೇಟಿಯಾಗುವುದಾಗಿ ಹೇಳುತ್ತಾ ಬರುತಿದ್ದು ಇದುವರೆಗೂ ನಿಯೋಗ ಮಾತ್ರ ತೆರಳಿಲ್ಲ ಸದ್ಯ ಹೋರಾಟಗಾರರು ಮೌನಕ್ಕೆ ಶರಣಾಗಿದ್ದಾರೆ
ಜೂನ್ 23ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಿಲ್ಲೆಗೆ ಆಗಮಿಸಿ ವಿವಿಧ ಕಾಮಗಾರಿಗಳನ್ನು ಉದ್ಘಾಟನೆ ಮಾಡಲಿದ್ದಾರೆ ಈ ಸಂದರ್ಭದಲ್ಲಿ ಲಿಂಗಸಗೂರು ತಾಲೂಕಿನ ಹೋರಾಟಗಾರರು ಆಸಕ್ತ ಜನಪ್ರತಿನಿಧಿಗಳು ಒಗ್ಗೂಡಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿ ಲಿಂಗಸಗೂರಿಗೆ ಜಿಲ್ಲಾಸ್ಪತ್ರೆಯನ್ನು ನಿಡಿ ಎನ್ನುವ ಅಹವಾಲು ಸಲ್ಲಿಸಬಹುದೇ ಕಾದು ನೋಡೋಣ?