ಲಯನ್ಸ್ ಕ್ಲಬ್ ಅಧ್ಯಕ್ಷ ಕಾಡ್ಲೂರು, ಪತ್ರಿಕಾ ವಿತರಿಕರಿಗೆ ಸ್ವೇಟರ್ ವಿತರಣೆ

Laxman Bariker
ಲಯನ್ಸ್ ಕ್ಲಬ್ ಅಧ್ಯಕ್ಷ ಕಾಡ್ಲೂರು, ಪತ್ರಿಕಾ ವಿತರಿಕರಿಗೆ ಸ್ವೇಟರ್ ವಿತರಣೆ
WhatsApp Group Join Now
Telegram Group Join Now

ಲಯನ್ಸ್ ಕ್ಲಬ್ ಅಧ್ಯಕ್ಷ ಕಾಡ್ಲೂರು, ಪತ್ರಿಕಾ ವಿತರಿಕರಿಗೆ ಸ್ವೇಟರ್ ವಿತರಣೆ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ಲಯನ್ಸ್ ಕ್ಲಬ್ ತಾಲೂಕಾಧ್ಯಕ್ಷರಾದ ಸಿದ್ದರಾಮಪ್ಪ ಕಾಡ್ಲೂರುರವರು ಪತ್ರಿಕಾ ವಿತರಕರಿಗೆ ಹಾಗೂ ಹಾಲು ಮಾರುವವರಿಗೆ ಸ್ವೇಟರ ವಿತರಣೆ ಮಾಡಿ ಸದುಪಯೋಗ ಮಾಡಿಕೊಳ್ಳುವಂತೆ ಹೇಳಿದರು
ಅವರು ಪಟ್ಟಣದ ಕಲ್ಯಾಣ ಕರ್ನಾಟಕ ಪತ್ರಿಕಾ ಕಾರ್ಯಾಲಯದ ಮುಂದೆ ಏರ್ಪಡಿಸಿದ ಸರಳ ಕಾರ್ಯಕ್ರಮದಲ್ಲಿ ಪತ್ರಿಕಾ ವಿತರಕರು ಹಾಗೂ ಹಾಲು ಹಾಕುವವರಿಗೆ ಸುಮಾರು ೩೦ ಸ್ವೇಟರ್ ಗಳನ್ನು ವಿತರಣೆ ಮಾಡಿ ಮಾತನಾಡುತ್ತಾ ಲಯನ್ಸ್ ಕ್ಲಬ್ ಹಲವಾರು ಜನೋಪಯೋಗಿ ಚಟುವಟಿಕೆಗಳನ್ನು ಮಾಡುತ್ತಿದ್ದು ಜನ ಮತ್ತು ಜಾನುವಾರುಗಳ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ ತಾಲೂಕಿನ ನಾಗರಾಳ ಹಾಗೂ ತೊರಲಬೆಂಚಿಯಲ್ಲಿ ಜಾನುವಾರುಗಳಿಗೆ ಲಸಿಕಾ ಕಾರ್ಯಕ್ರಮ ಮಾಡಲಾಯಿತು ಕಣ್ಣು ತಪಾಸಣಾ ಶಿಬಿರ, ಆರೋಗ್ಯ ಪರೀಕ್ಷಾ, ದುಶ್ಚಟಗಳ ನಿವಾರಣೆ ಕಾಐð ಸೇರಿದಂತೆ ಹಲವಾರು ಉಪಯುಕ್ತ ಕೆಲಸಗಳನ್ನು ಲಯನ್ಸ್ ಕ್ಲಬ್ ಮಾಡುತ್ತಾ ಬಂದಿದೆ
ಇತ್ತೀಚೆಗೆ ಚಳಿಗಾಲ ಪ್ರಾರಂಭವಾಗಿದ್ದು ಹೆಚ್ಚಿನ ಚಳಿಇದ್ದು ಜೀವದ ಹಂಗು ತೊರೆದು ತಮ್ಮ ಜೀವನಕ್ಕಾಗಿ ಪತ್ರಿಕಾ ವಿತರಕ ಸೇವೆ ಹಾಗೂ ಹಾಲು ಮಾರಾಟ ಮಾಡುವವರು ಚಳಿಯಲ್ಲಿ ಓಡಾಡಬೇಕಾಗುತ್ತದೆ ಅಂತಹ ಸಮಸ್ಯೆಯನ್ನು ಗಮನಿಸಿ ಸುಮಾರು ೩೦ ಸ್ವೇಟರ್ ಗಳನ್ನು ಅರ್ಹರಿಗೆ ಹಂಚಿಕೆಯನ್ನು ಮಾಡಲಾಯಿತು ಇದರ ಸದುಪಯೋಗವನ್ನು ಪಡೆಯಬೇಕೆಂದು ಹೇಳಿದರು
ಪತ್ರಿಕಾ ವಿತರಕರ ಪರವಾಗಿ ರಮೇಶ ರಾಠೋಡ ಮಾತನಾಡಿ ಚಳಿ ಮಳೆಯನ್ನು ಲೆಕ್ಕಿಸದೆ ಪತ್ರಿಕೆ ವಿತರಿಸಬೇಕಾಗುತ್ತದೆ ವಿತರಕರ ಸಂಕಷ್ಟವನ್ನು ಗಮನಿಸಿ ಸಿದ್ದರಾಮಪ್ಪ ಕಾಡ್ಲೂರುರವರು ನಮಗೆಲ್ಲ ಸ್ವೇಟರ್ ಕೊಡಿಸಿದ್ದು ಶ್ಲಾಘನೀಯವಾಗಿದೆ ಎಂದರು
ಈ ಸಂದರ್ಭದಲ್ಲಿ ನಿವೃತ್ತ ನೌಕರರ ಸಂಗದ ತಾಲೂಕಾಧ್ಯಕ್ಷರಾದ ಅಮರೇಶಪ್ಪ ಹೂನೂರು, ಲಯನ್ಸ್ ಕ್ಲಬ್ ನ ನಾಗರಾಜ ಗಸ್ತಿ ವಕೀಲರು, ಡಾ ಚಂದ್ರಶೇಖರ ನಾಗಲೀಕರ್, ಶರಣಬಸವರಾಜ ನಾಡಗೌಡ, ಲಕ್ಷಿö್ಮÃಪತಿ ಹಟ್ಟಿ, ಬಸವರಾಜ ವಕೀಲರು, ಲಕ್ಷö್ಮಣ ಬಾರಿಕೇರ್, ಎಂ,ಜಿ ಹಿರೇಮಠ, ಹಾಜೀಬಾಬು, ಕನಕಪ್ಪ, ಹನಮಂತಪ್ಪ,ಸೇರಿದAತೆ ಇದ್ದರು

WhatsApp Group Join Now
Telegram Group Join Now
Share This Article