ಲೋಕೋಪಯೋಗಿ ಇಲಾಖೆ ಎಇಇ ಪ್ರಕಾಶ ಆಫಿಸಿಗೆ ಬರುವುದಿಲ್ಲವೆಂದು ಶಪಥ ಮಾಡಿದ್ದಾನೆಯೆ?
ಮನೆಯಲ್ಲಿಯೆ ಎಲ್ಲಾ ಕಾರಬಾರ್,!! ಮನೆಗೆ ಎಡತಾಕುತ್ತಿರುವ ಸಾರ್ವಜನಿಕರು, ಜೆಇಗಳು!
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಪಟ್ಟಣದಲ್ಲಿರುವ ಲೋಕೋಪಯೋಗಿ ಇಲಾಖೆಯ ಎಇಇ ಕಛೇರಿಗೆ ಬರುವುದಿಲ್ಲವೆಂದು ಶಪಥ ಮಾಡಿದಂತೆ ಕಂಡು ಬರುತ್ತದೆ ಮನೆಯಲ್ಲಿಯೆ ಕುಳಿತು ಎಲ್ಲಾ ಕಾರಬಾರ್ ನಡೆಸುತ್ತಾನೆಂದು ಸಾರ್ವಜನಿಕರು ಆರೋಪಿಸುತ್ತಾರೆ
ಪಿಡಬ್ಲೂö್ಯಡಿ ಇಲಾಖೆಗೆ ಬಂದಿರುವ ಎಇಇ ಪ್ರಕಾಶಜ್ಯೋತಿ ಎನ್ನುವವರು ಯಾವಾಗಲೂ ಆಫಿಸಿನಲ್ಲಿ ಸಿಗುವುದಿಲ್ಲವೆಂದು ಆರೋಪಗಳು ಕೇಳಿಬರುತ್ತವೆ ತಮ್ಮ ಕೆಲಸ ಕಾರ್ಯಗಳಿಗಾಗಿ ಸಾರ್ವಜನಿಕರು ಗುತ್ತಿಗೆದಾರರು ಜೆಇಗಳು ಯಾರೆ ಬಂದರು ಇವರು ಮಾತ್ರ ಇಲಾಖೆಯ ಕಛೇರಿಯಲ್ಲಿ ಸಿಗುವುದಿಲ್ಲವೆಂದು ಖಡಾಖಂಡಿತವಾಗಿ ನುಡಿಯುತ್ತಾರೆ ಅಲ್ಲಿತಪ್ಪಿ ಭೇಟಿಯಾಗೋಣವೆಂದು ಯಾರಾದರು ಆಫಿಸಿಗೆ ಹೋದರೆ ನೀವು ಇಲ್ಲಿ ವರ್ಷವಿಡಿ ತಿರುಗಿದರು ಅವರು ನಿಮಗೆ ಸಿಗುವುದಿಲ್ಲ ಸೀದಾ ಮನೆಗೆ ಹೋಗಿ ಎಂದು ದಾರಿ ತೋರುತ್ತಾರೆ ಅಲ್ಲಿಗೆ ಈ ಅಧಿಕಾರಿಯ ಮನೆಯನ್ನು ಹುಡುಕಿ ಅಲೆಯಬೇಕಾದ ಪರಸ್ಥಿತಿ ಬಂದವರಾದುತ್ತದೆ
ಅದರAತೆ ಶುಕ್ರವಾರ ಅವರನ್ನು ಭೇಟಿಯಾಗಲು ವ್ಯಕ್ತಿಯೊಬ್ಬರು ಹೋದಾಗ ಸದರಿ ಎಇಇ ಆಫೀಸಿನಲ್ಲಿ ಇರಲಿಲ್ಲ ನೀವು ಯಾಕೆ ಇಲ್ಲಿಗೆ ಬಂದಿರಿ ಅವರ ಮನೆಗೆ ಹೋಗಿ ಭೇಟಿಯಾಗು ಎಂದು ಸಲಹೆ ನೀಡಿದಾಗ ಅವರ ಮನೆಯ ಕಡೆಗೆ ಹೋಗಿದ್ದಾರೆ ಅದಾಗಲೆ ಅವರ ಮನೆಯ ಮುಂದೆ ಹಲವಾರು ಜೆಇಗಳ ವಆಹನಗಳು ಗುತ್ತಿಗೆದಾರರ ವಾಹನಗಳು ಜನಸಾಮಾನ್ಯರ ವಾಹನಗಳು ಸಾಲುಗಟ್ಟಿ ನಿಂತಿದ್ದವು ಅದನ್ನು ನೋಡಿದರೆ ಈತ ಎಲ್ಲಾ ಕೆಲಸ ಕಾರ್ಯಗಳನ್ನು ಮನೆಯಿಂದಲೆ ನಿಭಾಯಿಸುತ್ತಾನೆ ಎನ್ನುವುದು ಸ್ಪಷ್ಟವಾಗುತ್ತದೆ
ಈತ ಮನೆಯಲ್ಲಿಯೆ ಕುಳಿತು ಕೆಲಸ ಕಾರ್ಯ ಮಾಡುತ್ತಿರಬೇಕಾದರೆ ಸರಕಾರ ಆಫಿಸನ್ನು ಕೊಟ್ಟಿರುವುದಾದರು ಏತಕ್ಕೆ ಎನ್ನುವುದು ಪ್ರಶ್ನೆಯಾಗುತ್ತದೆ ಮನೆಯೆ ಆಫೀಸೊ ಅಥವ ಆಫಿಸಿನಲ್ಲಿ ಮನೆಯೊ ಒಂದು ತಿಳಿಯದು ಆದರೆ ಜನರು ಮಾತ್ರ ಲೊಕೋಪಯೋಗಿ ಕಛೇರಿಗೆ ಅಲೆದು ಅಲೆದು ಸುಸ್ತಾಗುತ್ತಿರುವುದು ಮಾತ್ರ ತಪ್ಪಿಲ್ಲ ಹಾಗಾದರೆ ಸದರಿಅಧಿಕಾರಿ ಕಛೇರಿಗೆ ಬರುವುದಾದರು ಎಂದು ಎಲ್ಲರಿಗಿರುವುದು ಇದು ಒಂದೇಪ್ರಶ್ನೆ?