ಮಾಹಿತಿ ನೀಡದೆ ನದಿಗೆ ನೀರು,ಪಂಪಸೆಟ್ ಮುಳುಗಡೆ,ಆರೋಪ
ಕೃಷ್ಣಾನದಿತೀರದ ಗ್ರಾಮಸ್ಥರಿಗೆ ಮಾಹಿತಿ ನೀಡದ ತಾಲೂಕಾಡಳಿತ, ೫೦-೬೦ಪಂಪಸೆಟ್ ನೀರಿನಲ್ಲಿ ಮುಳುಗಡೆ, ರೈತರ ಆರೋಪ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ತಾಲೂಕಿನ ನದಿ ತೀರದ ಗ್ರಾಮಗಳಾದ ಯರಗೋಡಿ ಯಳಗುಂದಿ,ಕಡದರಗಡ್ಡಿ ಸೇರಿದಂತೆ ಹಲವಾರು ಗ್ರಾಮಗಳಿಗೆ ನದಿಗೆ ನೀರು ಬಿಡಲಾಗುತ್ತದೆ ಎನ್ನುವ ಸರಿಯಾದ ಮಾಹಿತಿ ತಾಲೂಕಾಡಳಿತ ನೀಡದೆ ಸುಮಾರು ೫೦ರಿಂದ೬೦ ರೈತರ ಪಂಪಸೆಟ್ ಗಳು ನೀರಿನಲ್ಲಿ ಮುಳುಗಡೆಯಾಗಿವೆ ಎಂದು ರೈತರು ಆರೋಪಿಸುತ್ತಾರೆ
ಮಳೆಗಾಲ ಪ್ರಾರಂಭವಾಗುತ್ತಲೆ ಕೃಷ್ಣಾನದಿಗೆ ನೀರು ಬಿಡಲಾಗುತ್ತದೆ ನದಿಪಾತ್ರದ ಗ್ರಾಮಗಳಾದ ಯರಗೋಡಿ,ಯಳಗುಂದಿ,
ಕಡದರಗಡ್ಡಿ,ಶೀಲಹಳ್ಳಿ,ಹಂಚಿನಾಳ ಸೇರಿದಂತೆ ಹಲವಾರು ಗ್ರಾಮಗಳಿಗೆ ತಾಲೂಕಾಡಳಿತದಿಂದ ಮುಂಜಾಗೃತವಾಗಿ ಪ್ರತಿವರ್ಷ ಡಂಗುರ ಸಾರುವುದು ಜನರಿಗೆ ಸುರಕ್ಷತೆಯ ಬಗೆಗೆ ಮಾಹಿತಿ ನೀಡುವುದು ಮುಳುಗಡೆಯಾದರೆ ಪುನರ್ವಸತಿ ಸೇರಿದಂತೆ ಹತ್ತು ಹಲವು ಕೆಲಸ ಕಾರ್ಯಗಳನ್ನು ತಾಲೂಕಾಡಳಿತ ನಿಭಾಯಿಸುತ್ತದೆ ಅಲ್ಲದೆ ನೀರು ಬಿಡುವ ಮುನ್ನ ಆಯಾ ಗ್ರಾಮಗಳಲ್ಲಿ ಡಂಗೂರಗಳನ್ನು ಹಾಕಿಸುವುದರ ಮೂಲಕ ಜನರನ್ನು ಎಚ್ಚರಿಸಿ ಮಾಹಿತಿಯನ್ನು ನೀಡಲಾಗುತ್ತದೆ ಆದರೆ ಇದುವರೆಗೂ ತಾಲೂಕಾಡಳಿತದಿಂದ ಯಾವುದೆ ಕಾರ್ಯಚಟುವಟಿಕೆಗಳು ನಡೆದಿಲ್ಲ ಕನಿಷ್ಠ ಭೇಟಿಯನ್ನು ನೀಡಿಲ್ಲವೆಂದು ಗ್ರಾಮಸ್ಥರು ಆರೋಪಿಸುತ್ತಾರೆ
ಜೂನ್ ೧೪ರಂದು ನದಿಗೆ ಏಕಾಏಕಿಯಾಗಿ ಸುಮಾರು ೫೨ಸಾವಿರ ಕ್ಯೂಸೆಕ್ ನೀರು ಬಿಟ್ಟಿರುವುದರಿಂದ ನದಿಗೆ ನೇರವಾಗಿ ರೈತರು ಹಾಕಿರುವ ಪಂಪಸೆಟಗಳು ನೀರಿನಲ್ಲಿ ಮುಳುಗಡೆಯಾಗಿದ್ದು ನೀರು ನೆರೆ ಇಳಿಯುವ ತನಕ ಮೋಟರ್ ಆನೆ ಮಾಡಲು ಬರುವುದಿಲ್ಲ ಕೆಲವು ಹಾಳಾಗಿರುತ್ತವೆ ಅಲ್ಲದೆ ಬೆಳೆಗೆ ನೀರು ಉಣಿಸಲು ಸಾಧ್ಯವಾಗುವುದಿಲ್ಲವೆನ್ನುತ್ತಾರೆ
ಆಯಾ ಗ್ರಾಮಗಳಲ್ಲಿ ಡಂಗೂರದ ಮೂಲಕ ನೀರು ಬಿಡುವ ವಿಷಯವನ್ನು ತಿಳಿಸಿದ್ದರೆ ನಮ್ಮ ಪಂಪಸೆಟ್ ಗಳನ್ನು ತೆಗೆದುಕೊಳ್ಳುತ್ತಿದ್ದೇವು ಎನ್ನುತ್ತಾರೆ
ಅಲ್ಲದೆ ಪ್ರತಿವರ್ಷ ನೆರೆಹಾವಳಿಗೂ ಮುನ್ನ ತಾಲೂಕಾಡಳಿತ ಭೇಟಿ ನೀಡಿ ನ್ಯಾಯಬೆಲೆ ಅಂಗಡಿಗಳ ಮೂಲಕ ಆಹಾರಧಾನ್ಯ ಸಂಗ್ರಹಣೆ, ಬಿಸಿಯೂಟ, ಪೊಲೀಸ್ ಇಲಾಖೆಯಿಂದ ಭದ್ರತೆ ಆರೋಗ್ಯ ಇಲಾಖೆಯಿಂದ ತಾತ್ಕಾಲಿಕ ಆಸ್ಪತ್ರೆಗೆ ವ್ಯವಸ್ಥೆ ಪ್ರವಾಹ ಹೆಚ್ಚಿದರೆ ಪುನರ್ವಸತಿ ಕೇಂದ್ರಕ್ಕೆ ವ್ಯವಸ್ಥೆ ಸಿದ್ದತೆ ಹೀಗೆ ತಾಲೂಕಾಡಳಿತ ಸಾಕಷ್ಟು ಮುಂಜಾಗ್ರತೆಗಳನ್ನು ತೆಗೆದುಕೊಳ್ಳುತ್ತಿತ್ತು ಈ ಸಲ ಇದುವರೆಗೂ ಯಾರು ನಮ್ಮ ಗ್ರಾಮಗಳಿಗೆ ಭೇಟಿನೀಡಿಲ್ಲ ಮತ್ತು ಯಾವುದೆ ಮುನ್ನೆಚ್ಚರಿಕೆಯ ಬಗೆಗೆ ಮಾತನಾಡಿಲ್ಲವೆಂದು ಯರಗೋಡಿ ಗ್ರಾಮಸ್ಥರಾದ ಸಂಗಪ್ಪ ತಂ ಚನ್ನಪ್ಪ ಹೊನ್ನಳ್ಳಿ, ಹನಮಪ್ಪ ತಂ ಯಲ್ಲಪ್ಪ,ಲಕ್ಷö್ಮಣ ತಂ ಹನಮಪ್ಪ, ಯಲ್ಲಪ್ಪ ತಂ ಹನಮಪ್ಪ,, ಯಲ್ಲಪ್ಪ ಮುಂಡರಗಿ, ಹನಮಪ್ಪ ಪೂಜಾರಿ ಸೇರಿದಂತೆ ಗ್ರಾಮದ ಹಲವಾರು ಜನರು ಆರೋಪಿಸುತ್ತಾರೆ ಇನ್ನು ಮುಂದಾದರು ತಾಲೂಕಾಡಳಿತ ಭೇಟಿ ನಿಡಿ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬಹುದೆ?