ಸಂಚಾರಿ ವೈದ್ಯಕೀಯ ಚಿಕಿತ್ಸಾ ವಾಹನ ಘಟಕಕ್ಕೆ ಶಾಸಕ ಮಾನಪ್ಪ ವಜ್ಜಲ್ ಚಾಲನೆ
ಗ್ರಾಮೀಣರ ಮನೆಬಾಗಿಲಿಗೆ ಆರೋಗ್ಯಸೇವೆ,ವೈದ್ಯರ ತಂತ್ರಜ್ಞರ ಕೊರತೆ!!
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಗ್ರಾಮೀಣರ ಆರೋಗ್ಯ ರಕ್ಷಣೆಗಾಗಿ ಸರಕಾರ ಸಂಚಾರಿ ವ್ಯದ್ಯಕೀಯ ಚಿಕಿತ್ಸಾ ವಾಹನ ಘಟಕವನ್ನು ತಂದಿದು ಗ್ರಾಮೀಣರು ಇದರ ಸದುಪಯೋಗವನ್ನು ಪಡೆದುಕೊಳ್ಳಭೇಕೆಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದರು

ಅವರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆಕೆಆರಡಿಬಿಮಾಕ್ರೋ ಯೋಜನೆಯಡಿಯಲ್ಲಿ ಮಂಜೂರಿಯಾದ ಸಂಚಾರಿ ವ್ಯದ್ಯಕೀಯ ಚಿಕಿತ್ಸಾ ವಾಹನ ಘಟಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಗ್ರಾಮೀಣಭಾಗದಲ್ಲಿರುವ ಬಡವರು ಆಸ್ಪತ್ರೆಗೆ ಬರುವುದು ತೊಂದರೆಯಾಗುತ್ತದೆ ಅಂತಹ ತೊಂದರೆಯನ್ನು ಗಮನಿಸಿ ಸರಕಾರಿ ಸಂಚಾರಿ ಚಿಕಿತ್ಸಾ ಘಟಕದ ವಾಹನವನ್ನು ತಾಲೂಕಿಗೆ ಮಂಜೂರಿ ಮಾಡಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಸರಕಾರ ಇದಕ್ಕೆ ಸೂಕ್ತ ವ್ಯದ್ಯಕೀಯ ಹಾಗೂ ತಂತ್ರಜ್ಞರನ್ನು ನೀಡಬೇಕು ಸದರಿ ಘಟಕದ ಸದುಪಯೋಗವಾಗಬೇಕು ಎಂದು ಹೇಳಿದರು
ಸಂಚಾರಿ ಘಟಕವು ವಾರದಲ್ಲಿ ಗುರುಗುಂಟ,ಈಚನಾಳ ಹಾಗೂ ಹಟ್ಟಿ ಭಾಗದ ದೊಡ್ಡಿ ಹಾಗೂ ತಾಂಡಾಗಳಿಗೆ ಭೇಟಿ ನೀಡಲಿದೆ ಇದರಲ್ಲಿ ವ್ಯದ್ಯಕೀಯದ ಎಲ್ಲಾ ಚಿಕಿತ್ಸಕ ವ್ಯವಸ್ಥೆಯನ್ನು ಹೊಂದಿದ್ದು ಸ್ಥಳದಲ್ಲಿಯೆ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ
ಸಂಚಾರಿ ವಾಹನಕ್ಕೆ ತಜ್ಞರ ಕೊರತೆ:ಗ್ರಾಮೀಣರ ಆರೋಗ್ಯ ರಕ್ಷಣೇಗಾಗಿ ಬಂದಿರುವ ಸದರಿ ಸಂಚಾರಿ ಚಿಕಿತ್ಸಾ ಘಟಕದ ವಾಹನಕ್ಕೆ ತಜ್ಞ ವ್ಯದ್ಯರು ತಂತ್ರಜ್ಷರ ಕೊರತೆ ಇದ್ದು ಅದನ್ನು ಸರಿ ಪಡಿಸಲು ಕಾಲಾವಖಶಬೇಕಾಗಬಹುದೆಂದು ಹೇಳಲಾಗುತ್ತಿದೆ ಉತ್ತಮ ಗುರಿಯೊಂದಿಗೆ ಬಂದಿರುವ ವಾಹನಕ್ಕೆ ಸರಕಾರ ಕೂಡಲೇ ವ್ಯದ್ಯರನ್ನು ಹಾಗೂ ತಂತ್ರಜ್ಷರನ್ನು ನೇಮಕ ಮಾಡಿದರೆ ಸಂಚಾರಿ ವಾಹನ ಚಿಕಿತ್ಸೆ ಸಫಲವಾಗಬಲ್ಲದು ಇಲ್ಲವಾದರೆ ತೊಂದರೆ ಎನ್ನುವ ಮಾತುಗಳು ಕೇಳಿಬಂದವು
೨೦೦ಬೆಡ್ ಆಸ್ಪತ್ರೆಗೆ ನಿಯೋಗ ಹೋಗಲಿದೆ ವಜ್ಜಲ್{ತಾಲೂಕಿಗೆ ಮಂಜೂರಿಯಾಗಿರುವ ೨೦೦ ಬೆಡ್ ನ ಜಿಲ್ಲಾಸ್ಪತ್ರೆಯು ಕೈತಪ್ಪಿರುವುದರಿಂದ ತಾಲೂಕಾ ನಿಯೋಗದೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಜಿಲ್ಲಾಸ್ಪತ್ರೆ ತರಲು ಪ್ರಯತ್ನಿಸಲಾಗುತ್ತಿದ್ದು ಮುಖ್ಯಮಂತ್ರಿಗಳಿಗೆ ಸಮಯ ಕೇಳಲಾಗಿದೆ ಅವರು ಸಮಯ ನೀಡಿದ ತಕ್ಷವೇ ನಿಯೋಗ ತೆರಳಿದೆ ಮತ್ತು ಜಿಲ್ಲಾಸ್ಪತ್ರೆಯನ್ನು ತರಲು ಯತ್ನಿಸಲಾಗುವುದು ಎಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದರು
ಈ ಸಂದರ್ಭದಲ್ಲಿ ಶರಣಪ್ಪ ಮೇಟಿ, ಮಂಡಲ ಅಧ್ಯಕ್ಷ ಅಯ್ಯಪ್ಪ ವಕೀಲ, ಪಾಮಯ್ಯ ಮುರಾರಿ, ಭೂಪನಗೌಡ ಪಾಟೀಲ್, ಗುಂಡಪ್ಪನಾಯಕ,ಗಿರಿಮಲ್ಲನಗೌಡ ಪಾಟೀಲ್, ಹುಲ್ಲೇಶ ಸಾಹುಕಾರ,ನಾಗಭೂಷಣ,ಮುದಕಪ್ಪನಾಯಕ, ಸಂಜೀವಪ್ಪ ಹುನಕುಂಟಿ ತಾಲೂಕಾ ವೈದ್ಯಾಧಿಕಾರಿ ಡಾ ಅಮರೇಶ ಪಾಟೀಲ್, ಡಾ ರುದ್ರಗೌಡ ಪಾಟೀಲ್, ಪ್ರಾಣೇಶ ಸೇರಿದಂತೆ ಮುಖಂಡರು ಆಸ್ಪತ್ರೆ ಸಿಬ್ಬಂದಿಗಳು ಇದ್ದರು