ಮುದಗಲ್ ಠಾಣೆ ಪಿಎಸ್ ಐ ಹುದ್ದೆ ನಾ ಕೊಡೆ,ನೀ ಬಿಡೆ, ಜಂಗಿಕುಸ್ತಿಯಲ್ಲಿ, ನಿಯುಕ್ತಿಗಾಗಿ ಕಾಯುತ್ತಿರುವ ಪಿಎಸೈ ಬಸವರಾಜನಾಯಕ!!
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಗ್ರಾನೈಟಗಳ ತಾಣ ಮುದಗಲ್ ಪೊಲೀಸರಿಗೂ ಪ್ರತಿಷ್ಠೆಯ ಕಣವಾಗುತ್ತಿದೆಯಾ? ನೂತನವಾಗಿ ವರ್ಗಾವಣೆಗೊಂಡು ಬಂದಿರುವ ಪಿಎಸೈ ಬಸವರಾಜನಾಯಕರಿಗೆ ಸ್ಥಳ ನಿಯುಕ್ತಿಯಾಗದೆ ಅಲೆದಾಡುವದೆ ಕೆಲಸವಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ
ಮುದಗಲ್ ಪೊಲೀಸ್ ಠಾಣೆಗೆ ನೂತನವಾಗಿ ವರ್ಗಾವಣೆಯಾಗಿ ದಿನಾಂಕ ೧೧-೦೬-೨೦೨೫ರಂದು ವರ್ಗಾವಣೆಗೊಂಡಿದ್ದರು ಇದುವರೆಗೂ ಠಾಣೆಗೆ ವರದಿ ಮಾಡಿಕೊಳ್ಳಲು ಕಾಣದ ಕೈಗಳು ಅಡ್ಡಿಪಡಿಸುತ್ತಿವೆ ಎನ್ನುವ ಮಾತುಗಳು ಕೇಳಿಬರುತ್ತಿವೆ
ಈಗಾಗಲೆ ವೆಂಕಟೇಶ ಎಂ ಎನ್ನುವವರು ಇಲ್ಲಿ ಪಿಎಸ್ ಐ ಯಾಗಿ ಕೆಲಸ ಮಾಡುತ್ತಿದ್ದು ಸದರಿ ಸಥಳಕ್ಕೆ ಇಲಾಖೆಯು ಬಸವರಾಜ ನಾಯಕ ಎನ್ನುವವರನ್ನು ವರ್ಗಾವಣೆಗೊಳಿಸಿದೆ ಇಲಾಖೆಯ ಆದೇಶದಂತೆ ಬಸವರಾಜರವರು ಸದರಿ ಠಾಣೆಗೆ ಪಿಎಸ್ ಐ ಯಾಗಿ ನಿಯುಕ್ತಿಯಾಗಬೇಕಾಗಿತ್ತು ಆದರೆ ಅಂದಿನಿಂದ ಇಂದಿನವರೆಗೂ ಅಲೆಯುತಿದ್ದರು ಅವರಿಗೆ ಅಲ್ಲಿ ವರದಿ ಮಾಡಿಕೊಳ್ಳಲು ಆಗುತ್ತಿಲ್ಲ ಎನ್ನಲಾಗುತ್ತಿದೆ
ಬೆನ್ನಹಿಂದೆ ಕಾಣದ ಕೈಗಳಿವೆಯಾ? ಇಲಾಖೆಯ ನಿಯಮದ ಪ್ರಕಾರ ವರ್ಗಾವಣೆಗೊಂಡವರು ಸೂಚಿಸಿದ ಸ್ಥಳಕ್ಕೆ ತೆರಳುವುದು ಅನಿವಾರ್ಯ ಆದರೆ ವೆಂಕಟೇಶ ಎಂ ಎನ್ನುವವರು ಇಲ್ಲಿ ಪಿಎಸೈ ಕೆಲಸ ಮಾಡುತ್ತಿದ್ದು ಅವರನ್ನು ಅಲ್ಲೆ ಮುಂದುವರೆಸು ಷಡ್ಯಂತ್ರಗಳು ನಡೆಯುತ್ತಿವೆಯಾ ಎನ್ನುವ ಮಾತುಗಳು ಇಲ್ಲಿ ಕೇಳಿಬರುತ್ತಿವೆ
ಪಿಎಸೈ ಬಸವರಾಜನಾಯಕರವರು ಜೂನ್ ೧೧ಕ್ಕೆ ಬಡುಗಡೆಯಾಗಿದ್ದರು ಇದುವರೆಗೂ ಮುದಗಲ್ ಠಾಣೆಯಲ್ಲಿ ವರದಿ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದು ಪಿಎಸೈ ಸ್ಥಾನ ನಾಕೊಡೆ ನೀ ಬಿಡೆ ಎನ್ನುವ ತಾಕಲಾಟದಲ್ಲಿ ತೊಳಲಾಡುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ