ಮೃಗಶಿರ : ಉಚಿತ ಮಾತ್ರೆ ಹಾಗೂ ರೋಗ ನಿರೋಧಕ ಕಷಾಯ ವಿತರಣೆ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸುಗೂರು. ಜೂ. 8.-ಪ್ರತಿ ವರ್ಷದಂತೆ ಈ ವರ್ಷವೂ ಮೃಗಶಿರ ಮಳೆ ನಕ್ಷತ್ರ ಆಗಮಿಸುವ ಸಮಯಕ್ಕೆ ವೈದ್ಯ ಕುಮಾರಸ್ವಾಮಿ ಸ್ಥಾಪಿಸಿದ, ಶರಣ ಶ್ರೀ ವೈದ್ಯ ಸಂಗಣ್ಣ ಗ್ರಾಮೀಣ ಆರೋಗ್ಯ ಅಭಿವೃದ್ದಿ ಟ್ರಸ್ಟ್ ವತಿಯಿಂದ ,ಜನರಿಗೆ ಉಚಿತ ಮಾತ್ರೆ ಹಾಗೂ ರೋಗ ನಿರೋಧಕ ಕಷಾಯ ವಿತರಣೆ ಮಾಡಲಾಯಿತು.
ಪಟ್ಟಣದ ಹೊರ ವಲಯದ ಜೆ.ಕೆ ಸ್ವಿಮ್ಮಿಂಗ್ ಪೂಲ್ ಆವರಣದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಡಾ.ಮರಿಸ್ವಾಮಿ ಮಾತನಾಡಿ ಮೃಗಶಿರ ಮಳೆ ನಕ್ಷತ್ರ ಪ್ರವೇಶದ ನಂತರ ವಾತಾವರಣ ದಲ್ಲಿ ಉಂಟಾಗುವ ತಂಪು ಹವಾಮಾನ ದಿಂದ ಮನುಷ್ಯರಲ್ಲಿ ಶೀತ ರೋಗಗಳು,ದಮ್ಮು,ಕೆಮ್ಮು,ಕಫ,ಉಬ್ಬಸ,ಅಸ್ತಮಾ,ಅಲರ್ಜಿ ರೋಗಗಳು ಕಾಣಿಸಿಕೊಳ್ಳುವುದನ್ನು ತಡೆಗಟ್ಟಲು ಈ ದಿನದಂದು ಮಾತ್ರೆ ಹಾಗೂ ರೋಗ ನಿರೋಧಕ ಕಷಾಯ ಸೇವಿಸುವುದು ಆರೋಗ್ಯ ದೃಷ್ಠಿಯಿಂದ ಉತ್ತಮ ಎಂದರು.
ನಂತರ ಔಷಧಿ ವಿತರಿಸಿ ಮಾತನಾಡಿದ ಟ್ರಸ್ಟನ ಅಧ್ಯಕ್ಷ ವೈದ್ಯ ಕುಮಾರಸ್ವಾಮಿ ,ಪ್ರತಿ ವರ್ಷದಂತೆ ಈ ವರ್ಷವೂ ಮೃಗಶಿರ ನಕ್ಷತ್ರ ಪ್ರವೇಶಿಸುವ ಪ್ರಯುಕ್ತ,ಉಚಿತ ಔಷದಿ ವಿತರಣೆ ಮಾಡುತ್ತಿದ್ದು,ನಮ್ಮಲ್ಲಿಯ ಔಷಧಿ ವಿಶೇಷ ಗುಣ ಹೊಂದಿದ್ದು, ಮೇ 08 ರಂದು ಮೃಗಶಿರ ನಕ್ಷತ್ರ ಪ್ರವೇಶಿಸುವ ನಿಗದಿತ ಸಮಯಕ್ಕೆ ಈ ಮಾತ್ರೆ ಮತ್ತು ಕಷಾಯ ಸೇವನೆ ಬಳಕೆ ಮಾಡಬೇಕು, ಆರೋಗ್ಯಯುತ ವ್ಯಕ್ತಿ ಕೂಡ ರೋಗನಿರೋಧಕ ಶಕ್ತಿ ಹೆಚ್ಚಿಸಲು ಈ ಕಷಾಯವನ್ನು ಸೇವಿಸಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಈ ವೇಳೆ ಪುರಸಭೆ ಸದಸ್ಯರಾದ ಪ್ರಭುಸ್ವಾಮಿ ಅತ್ನೂರು, ಪಂಚವಟಿ ಆಯುರ್ವೇದ ಪಂಚಕರ್ಮ ಚಿಕಿತ್ಸಾ ಕೇಂದ್ರ ದ ಮಾಲೀಕರಾದ ಜಗನ್ನಾಥ ಚಿತ್ತಾಪುರ,ಸಿಬ್ಬಂದಿಗಳಾದ ಚಂದ್ರಶೇಖರ್, ಸುನೀತ ಶಿವಮೊಗ್ಗ, ಮಂಜುನಾಥ,ಗುರು ಪತ್ತಾರ್, ಬಸವರಾಜ್ ಸ್ವಾಮಿ ಹಿರೇಮಠ್ ಸೇರಿದಂತೆ ಹಲವಾರು ಜನ ಉಚಿತ ಔಷಧಿಯ ಸದುಪಯೋಗವನ್ನು ಪಡೆದುಕೊಂಡರು.