ಶರಣರ ಸಂಸ್ಕೃತಿ ಸನಾತನ ಸಂಸ್ಕೃತಿ ಎಂದು ಬಿಂಬಿಸುವ ಹುನ್ನಾರ-ಜೆ,ಎಸ್ ಪಾಟೀಲ್
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸುಗೂರು: :ಲಿಂಗಾಯತ ಧರ್ಮದ ಜನರು ಲಿಂಗಾಯತ ಧರ್ಮದ ಸಿದ್ಧಾಂತ, ಆಚರಣೆಗಳ ಕುರಿತು ಕಳೆದ ೫೦ ವರ್ಷಗಳಿಂದ ಮಠ ಮಾನ್ಯಗಳು, ವಿಶ್ವವಿದ್ಯಾಲಯಗಳ ಸಂಘಟನೆಗಳ ಮೂಲಕ ಪುರಾಣ, ಪ್ರವಚನಗಳನ್ನು ಹೇಳಿದರೂ, ಅವುಗಳನ್ನು ಮನರಂಜನೆ ರೂಪದಲ್ಲಿ ಕೇಳಿ ಸಿದ್ಧಾಂತಗಳನ್ನು ಪಾಲಿಸದೇ, ಲಿಂಗಾಯತರು ಆಚರಣೆಯಲ್ಲಿ ನಿಜ ಲಿಂಗಾಯತರಾಗಿ ಬದಲಾಗುತ್ತಿಲ್ಲ ಎಂದು ಚಿಂತಕರಾದ ಜೆ.ಎಸ ಪಾಟೀಲ ಬೇಸರ ವ್ಯಕ್ತಪಡಿಸಿದರು.
ಪುರಸಭೆ ವ್ಯಾಪ್ತಿಯ ಕರಡಕಲ್ಲ ಗ್ರಾಮದ ಚಿತ್ತರಗಿ ಶ್ರೀ ವಿಜಯಮಹಾಂತೇಶ್ವರ ಸಂಸ್ಥಾನ ಮಠದಲ್ಲಿ ಆಯೋಜಿಸಿದ್ದ.ಡಾ. ಮಹಾಂತ ಶಿವಯೋಗಿಗಳ ೭ ನೇ ಶರಣೋತ್ಸವ ಮತ್ತು ವಚನ ಕಟ್ಟಿನ ಅಡ್ಡ ಪಲ್ಲಕ್ಕಿ ಉತ್ಸವ ಕಾರ್ಯಕ್ರಮದಲ್ಲಿ ಶಿವಾನುಭವ ತರಭೇತಿ ಶಿಬಿರ ಉದ್ಘಾಟಿಸಿ, ಅನುಭಾವ ನುಡಿಗಳನ್ನಾಡಿದ ಅವರು ಲಿಂಗಾಯತರು ಲಿಂಗಾಯತ ತತ್ವ ಸಿದ್ಧಾಂತ ಮರೆತು, ಅಸಂಘಟಿತರಾಗಿ ಬೇರೆ ಬೇರೆ ಸಿದ್ಧಾಂತಗಳ ಆಚರಣೆಗಳ ಮೂಲಕ ಲಿಂಗಾಯತರು ನಿಜ ಧರ್ಮದ ಆಚರಣೆಯಿಂದ ವಿಮುಖರಾಗುತ್ತಿದ್ದು, ಜಗತ್ತಿನಲ್ಲಿಯೇ ಲಿಂಗಾಯತರು ಅತ್ಯಂತ ಅಸಂಘಟಿತ ರಾಗಿದ್ದಾರೆ,
ಈ ನೆಲದಲ್ಲಿ ದೇಶದ ಸ್ವಾತಂತ್ರ್ಯ, ರಾಜ್ಯದ ಏಕೀಕರಣ, ಶಿಕ್ಷಣದಿಂದ ವಂಚಿತಗೊAಡ ಸಮುದಾಯಗಳಿಗೆ ಶಿಕ್ಷಣ ಕೊಡಿಸುವಲ್ಲಿ ಲಿಂಗಾಯತರ ಪಾತ್ರ ದೊಡ್ಡದಿದೆ ಎಂದು ಹೇಳಿದರು.
ನಂತರ ದಾವಣಗೆರೆಯ ವಿರಕ್ತ ಮಠದ ಪ್ರಭು ಸ್ವಾಮಿಗಳು,ಹಾಗೂ ಸಂತೆಕೆಲ್ಲೂರು ಗುರುಬಸವ ಸ್ವಾಮೀಜಿಗಳು ಸಭಿಕರನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು. ವೇದಿಕೆಯ ನೇತೃತ್ವ ಇಲಕಲ್ಲ ಗುರು ಮಹಾಂತ ಸ್ವಾಮಿಗಳು ವಹಿಸಿಕೊಂಡಿದ್ದರು.
ಸಂಧರ್ಭದಲ್ಲಿ ವೇದಿಕೆಯಲ್ಲಿ ಲಿಂಗಸುಗೂರಿನ ವಿಜಯ ಮಹಾಂತೇಶ್ವರ ಶಾಖಾ ಮಠದ ಸಿದ್ದಲಿಂಗ ಸ್ವಾಮಿಗಳು, ವಿರತೇಶ್ವರ ಸ್ವಾಮಿಗಳು, ಬಸವ ಭೂಷಣ ಸ್ವಾಮಿಗಳು, ಅನುಭಾವಿಗಳಾದ ಅಶೋಕ ಬರಗುಂಡಿ, ಡಾ.ಮಲ್ಲೇಶಗೌಡ ಪಾಟೀಲ್ ಉಪಸ್ಥಿತರಿದ್ದರು.