52 ಲಕ್ಷದ ಭಾರಿ ಭ್ರಷ್ಟಾಚಾರದ ಆರೋಪ, ಅರಣ್ಯ ಇಲಾಖೆಯಿಂದ ಹಾಕಿದ ಸಸಿಗಳು ನಾಪತ್ತೆ ದೂರು, ಪರೀಶಿಲನೆ,

Laxman Bariker
52 ಲಕ್ಷದ ಭಾರಿ ಭ್ರಷ್ಟಾಚಾರದ ಆರೋಪ, ಅರಣ್ಯ ಇಲಾಖೆಯಿಂದ ಹಾಕಿದ ಸಸಿಗಳು ನಾಪತ್ತೆ ದೂರು, ಪರೀಶಿಲನೆ,
WhatsApp Group Join Now
Telegram Group Join Now

ಅಮರೇಶ್ವರ ಗುಡ್ಡದಲ್ಲಿ ಅರಣ್ಯ ಇಲಾಖೆಯಿಂದ ಹಾಕಿದ ಸಸಿಗಳು ನಾಪತ್ತೆ ದೂರು, ಪರೀಶಿಲನೆ, 52ಲಕ್ಷ ಭ್ರಷ್ಟಾಚಾರದ ಆರೋಪ !!?

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸುಗೂರ:ತಾಲೂಕಿನ ಹೊನ್ನಳ್ಳಿ ಗ್ರಾಮ ಪಂಚಾಯತ ಯರಡೋಣ ಸಮೀಪದ ಅಮರೇಶ್ವರ ಗುಡ್ಡದಲ್ಲಿ ಪ್ರಾದೇಶಿಕ ಅರಣ್ಯ ಇಲಾಖೆಯಿಂದ ೨೦೨೩-೨೪ರಲ್ಲಿ ೩ಸಾವಿರ ಸಸಿಗಳನ್ನು ನಡೆಲಾಗಿದೆಂದು ಬೊಗಸ್ ಬಿಲ್ ಮಾಡಿ ತಾಲೂಕಿನ ೭ ಗ್ರಾಮ ಪಂಚಾಯತಗಳಲ್ಲಿಯು ಇದೆ ರೀತಿ ಬೋಗಸ್ ಬಿಲ್ ಮಾಡಿ ಬಿಓಸಿ ಹಣ ಲಪಟಾಸಿಲಾಗಿದೆಂದು ಕುಬೇರಪ್ಪ ಗುಪ್ಪಿಗುಡ್ಡ ಎನ್ನುವರು ತಾಲೂಕು ಪಂಚಾಯತ ಕಾರ್ಯನಿರ್ವಾಹ ಅಧಿಕಾರಿಗೆ ದೂರು ಸಲ್ಲಿಸಿರುವರು.
ಹೊನ್ನಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಯರಡೋಣ ಸಮೀಪ ಅಮರೇಶ್ವರ ಗುಡ್ಡದಲ್ಲಿ ೩ ಸಾವಿರ ಸಸಿಗಳು ನಡೆಲಾಗಿದೆ ಎಂದು ಪ್ರಾದೇಶಿಕ ವಲಯ ಅರಣ್ಯ ಇಲಾಖೆ ದಾಖಲಾತಿಯಲ್ಲಿ ದೂರಿನ್ವಯ ತಾ.ಪಂ ಇಓ ಸ್ಥಳಕ್ಕೆ ಭೇಟಿ ನೀಡಿ ಪರಿಶಿಲಿಸಿದಾಗ ಅಲ್ಲಿ ಯಾವದೆ ಸಸಿಗಳು ಕಂಡು ಬಂದಿಲ್ಲ ಕೆಲವೊಂದು ನಿರ್ವಾಹಣೆ ಕೂರತೆಯಿಂದ ಒಣಗಿ ಹೋಗಿವೆ ೩ ಸಾವಿರ ಸಸಿಗಳಿಗೆ ಸಂಬAಧಿಸಿದAತೆ ಬೊಗಸ್ ಬಿಲ್ ಮೂಲಕ ಸಾಮಗ್ರಿ ವೆಚ್ಚ ಪಡೆಯಲಾಗಿದೆ ಎಂದು ತಿಳಿದುಬಂದಿದೆ
ಕುಬೆರಪ್ಪ ದೂರಿನ್ವಯ ೨೦೨೩-೨೪ನೇ ಸಾಲೀನಲ್ಲಿ ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ವ್ಯಾಪ್ತಿಯಲ್ಲಿ ನಡೆದಿರುವ ಯಾವದೇ ಸಸಿಗಳನ್ನು ನಡೆದೆ ಹಾಗೂ ಸರಿಯಾಗಿ ನಿರ್ವಾಹಣೆ ಮಾಡದೆ ಸಾಮಗ್ರಿಗಳ ವೆಚ್ಚ(ಬಿಓಸಿ) ಬಾರಿ ಬೂಗಸ್ ಬಿಲ್ಲ ಮಾಡಿದ್ದು ತಾಲೂಕಿನ ೭ ಪಂಚಾಯತಿಗಳಾದ ಹೊನ್ನಳ್ಳಿ, ದೇವರಭೂಪೂರ, ಈಚನಾಳ, ರೋಡಲಬಂಡಾ ಯುಕೆಪಿ, ಕಾಳಪೂರು, ಗುಂತಗೋಳ ಪಂಚಾಯತಿಗಳ ಒಟ್ಟು ೫೨ ಲಕ್ಷ೨೧ಸಾವಿರ ೨೮೦ ರೂ ಬಾರಿ ಭ್ರಷ್ಟಾಚಾರವೇಸಗಿದಾರೆ ಇದರಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಹಾಗೂ ವಲಯ ಅರಣ್ಯ ಅಧಿಕಾರಿಗಳು ಶ್ಯಾಮಿಲಾಗಿದ್ದಾರೆ ಎಂದು ದೂರಿದ್ದಾರೆ.

WhatsApp Group Join Now
Telegram Group Join Now
Share This Article